Asianet Suvarna News Asianet Suvarna News

ಬಂಗಾಳದಲ್ಲಿ ಮತ್ತೆ ಹಿಂಸೆ: ನಾಡಬಾಂಬ್‌ ತೂರಾಟ!

ಬಂಗಾಳದಲ್ಲಿ ಮತ್ತೆ ಹಿಂಸೆ: ನಾಡಬಾಂಬ್‌ ತೂರಾಟ!| ಬಿಜೆಪಿ ತೃಣಮೂಲ ಕಾಂಗ್ರೆಸ್‌ ಕಾರ್ಯಕರ್ತರ

Fresh violence erupts in West Bengal s Bhatpara
Author
Bangalore, First Published Jun 23, 2019, 9:13 AM IST

ಕೋಲ್ಕತಾ[ಜೂ.23]: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಶುರುವಾದ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್‌ ಕಾರ್ಯಕರ್ತರ ನಡುವಿನ ಘರ್ಷಣೆ ಮತ್ತೆ ಮುಂದುವರಿದಿದೆ.

ಕೋಲ್ಕತಾದಿಂದ 30 ಕಿ.ಮೀ. ದೂರದಲ್ಲಿರುವ ಭಾಟ್‌ಪಾರಾದಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿ ಶನಿವಾರ ಎರಡೂ ಪಕ್ಷಗಳ ಕಾರ್ಯಕರ್ತರು ನಾಡಬಾಂಬ್‌, ಕಲ್ಲುಗಳನ್ನು ತೂರಿ ಹೊಡೆದಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ.

ಗುರುವಾರ ಭಾಟ್‌ಪಾರಾದಲ್ಲಿ ಸಂಭವಿಸಿದ್ದ ಘರ್ಷಣೆಯಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರು ಹತರಾಗಿದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸೂಚನೆ ಮೇರೆಗೆ ವಸ್ತು ಸ್ಥಿತಿ ಅಧ್ಯಯನ ನಡೆಸಲು ಸಂಸದ ಅಹ್ಲುವಾಲಿಯಾ ನೇತೃತ್ವದ ತ್ರಿಸದಸ್ಯ ತಂಡ ಭಾಟ್‌ಪಾರಾಕ್ಕೆ ಆಗಮಿಸಿತ್ತು. ಈ ತಂಡ ಪರಿಶೀಲನೆ ಮುಗಿಸಿ ವಾಪಸ್‌ ತೆರಳುತ್ತಿದ್ದಂತೆ ಘರ್ಷಣೆ ಉಂಟಾಗಿದೆ.

Follow Us:
Download App:
  • android
  • ios