Asianet Suvarna News Asianet Suvarna News

ಅರೆಸೇನಾ ಪಡೆಗಳ ಸಾಮಾನ್ಯ ಸೈನಿಕನಿಗೂ ವಿಮಾನ ಪ್ರಯಾಣ: ಕೇಂದ್ರ!

ಪುಲ್ವಾಮಾ ದಾಳಿ ಬಳಿಕ ಎಚ್ಚೆತ್ತ ಕೇಂದ್ರ ಸರ್ಕಾರ| ಅರೆಸೇನಾ ಪಡೆಗಳಿಗೂ ವಿಮಾನದಲ್ಲಿ ಪ್ರಯಾಣಿಸಲು ಅವಕಾಶ| ಸಾಮಾನ್ಯ ಸ್ತರದ ಸೈನಿಕರಿಗೂ ವಿಮಾನ ಪ್ರಯಾಣ| ದೆಹಲಿ-ಶ್ರೀನಗರ, ಜಮ್ಮು-ಶ್ರೀನಗರದ ಮಾರ್ಗಗಳಲ್ಲಿ ಪ್ರಯಾಣ|

Free Air Travel Announced For Paramilitary Soldiers
Author
Bengaluru, First Published Feb 21, 2019, 4:38 PM IST

ನವದೆಹಲಿ(ಫೆ.21): ಪುಲ್ವಾಮಾ ಭಯೋತ್ಪಾದಕ ದಾಳಿಯ ಬಳಿಕ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ, ಅರೆಸೇನಾ ಪಡೆಗಳಿಗೂ ವಿಮಾನದಲ್ಲಿ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟಿದೆ. 

ಈ ಕುರಿತು ಇಂದು ಗೃಹ ವ್ಯವಹಾರಗಳ ಸಚಿವಾಲಯ ಆದೇಶದ ಹೊರಿಡಿಸಿದ್ದು, ಕಾಶ್ಮೀರದಲ್ಲಿ ಕರ್ತವ್ಯಕ್ಕೆ ನಿಯೋಜನೆಯಾಗಿರುವ ಸಿಆರ್​ಪಿಎಫ್ ಸೇರಿದಂತೆ ಎಲ್ಲಾ ಅರೆಸೇನಾ ಪಡೆಗಳ ಸೈನಿಕರೂ ಕೂಡ ಕಮರ್ಷಿಯಲ್ ಫ್ಲೈಟ್ ಬಳಸಬಹುದಾಗಿದೆ ಎಂದು ತಿಳಿಸಿದೆ.

ರಜೆಯ ಮೇಲೆ ಹೋಗುವಾಗ ಹಾಗೂ ರಜೆ ಮುಗಿಸಿ ಕರ್ತವ್ಯಕ್ಕೆ ಮರಳುವಾಗ ಈ ಯೋಧರು ದೆಹಲಿ-ಶ್ರೀನಗರ, ಜಮ್ಮು-ಶ್ರೀನಗರದ ಮಾರ್ಗಗಳಲ್ಲಿ ತಮ್ಮಿಷ್ಟದ ವಿಮಾನಗಳನ್ನು ಬಳಕೆ ಮಾಡಬಹುದಾಗಿದೆ.

ಪುಲ್ವಾಮ ಘಟನೆ ನಡೆದ ನಂತರ ಸೈನಿಕರನ್ನು ರಸ್ತೆಯ ಮೇಲೆ ಸಾಗಿಸುವ ಬದಲು ವಿಮಾನದಲ್ಲಿ ಕರೆದೊಯ್ಯಬಹುದಿತ್ತೆಂಬ ಸಲಹೆಗಳು ಮತ್ತು ಟೀಕೆಗಳು ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಹೊಸ ಆದೇಶ ಹೊರಡಿಸಿದೆ.
 

Follow Us:
Download App:
  • android
  • ios