Asianet Suvarna News Asianet Suvarna News

ಸಂಪ್'ಗೆ ಬಿದ್ದು ನಾಲ್ವರ ದುರ್ಮರಣ

ಕಾರ್ಮಿಕರಾದ ನಾಗಪ್ಪ, ನಾರಾಯಣಪ್ಪ, ಪೆದ್ದಣ್ಣ, ಜನಾರ್ಧನ ಹಾಗೂ ಚೆನ್ನಪ್ಪ ಸಂಪ್ಕೆಲಸ ಮಾಡುತ್ತಿದ್ದರು.

Four dead in Koppala Sump drowning

ಗೌರಿಬಿದನೂರು(ಅ.08): ನಿರ್ಮಾಣ ಹಂತದ ಸಂಪ್​ನಲ್ಲಿ ಬಿದ್ದು ಉಸಿರುಗಟ್ಟಿ ನಾಲ್ವರು ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರ ಗೌರಿಬಿದನೂರು ತಾಲೂಕಿನ ದಿನ್ನೇನಹಳ್ಳಿಯಲ್ಲಿ ರಾಮಕೃಷ್ಣಯ್ಯ ಎಂಬುವರಿಗೆ ಸೇರಿದ ಕಟ್ಟಡದಲ್ಲಿ ಸಂಪ್​ ಕಾಮಗಾರಿ ನಡೆದಿತ್ತು. ಕಾರ್ಮಿಕರಾದ ನಾಗಪ್ಪ, ನಾರಾಯಣಪ್ಪ, ಪೆದ್ದಣ್ಣ, ಜನಾರ್ಧನ ಹಾಗೂ ಚೆನ್ನಪ್ಪ ಸಂಪ್​ ಕೆಲಸ ಮಾಡುತ್ತಿದ್ದರು. ಆ ವೇಳೆ ಉಸಿರುಗಟ್ಟಿ ನಾಲ್ವರು ಸ್ಥಳದಲ್ಲೇ ಮೃತಪಟ್ಟರೆ, ಇನ್ನೊಬ್ಬ ಕಾರ್ಮಿಕ ಚೆನ್ನಪ್ಪನ ಸ್ಥಿತಿ ಗಂಭೀರವಾಗಿದೆ. ಘಟನಾ ಸ್ಥಳದಲ್ಲಿ ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ  ಮಂಚೇನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Follow Us:
Download App:
  • android
  • ios