ಸಂಪ್'ಗೆ ಬಿದ್ದು ನಾಲ್ವರ ದುರ್ಮರಣ
ಕಾರ್ಮಿಕರಾದ ನಾಗಪ್ಪ, ನಾರಾಯಣಪ್ಪ, ಪೆದ್ದಣ್ಣ, ಜನಾರ್ಧನ ಹಾಗೂ ಚೆನ್ನಪ್ಪ ಸಂಪ್ ಕೆಲಸ ಮಾಡುತ್ತಿದ್ದರು.
ಗೌರಿಬಿದನೂರು(ಅ.08): ನಿರ್ಮಾಣ ಹಂತದ ಸಂಪ್ನಲ್ಲಿ ಬಿದ್ದು ಉಸಿರುಗಟ್ಟಿ ನಾಲ್ವರು ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ಗೌರಿಬಿದನೂರು ತಾಲೂಕಿನ ದಿನ್ನೇನಹಳ್ಳಿಯಲ್ಲಿ ರಾಮಕೃಷ್ಣಯ್ಯ ಎಂಬುವರಿಗೆ ಸೇರಿದ ಕಟ್ಟಡದಲ್ಲಿ ಸಂಪ್ ಕಾಮಗಾರಿ ನಡೆದಿತ್ತು. ಕಾರ್ಮಿಕರಾದ ನಾಗಪ್ಪ, ನಾರಾಯಣಪ್ಪ, ಪೆದ್ದಣ್ಣ, ಜನಾರ್ಧನ ಹಾಗೂ ಚೆನ್ನಪ್ಪ ಸಂಪ್ ಕೆಲಸ ಮಾಡುತ್ತಿದ್ದರು. ಆ ವೇಳೆ ಉಸಿರುಗಟ್ಟಿ ನಾಲ್ವರು ಸ್ಥಳದಲ್ಲೇ ಮೃತಪಟ್ಟರೆ, ಇನ್ನೊಬ್ಬ ಕಾರ್ಮಿಕ ಚೆನ್ನಪ್ಪನ ಸ್ಥಿತಿ ಗಂಭೀರವಾಗಿದೆ. ಘಟನಾ ಸ್ಥಳದಲ್ಲಿ ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಮಂಚೇನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.