ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ ಆರ್‌ಎಸ್‌ಎಸ್‌ ನಾಯಕ! ಕಚೇರಿಗೆ ಹಾಜರಾಗುವಂತೆ ಗೋವಾ ಸಿಎಂ ಪರಿಕ್ಕರ್ ಮೇಲೆ ಒತ್ತಡ! ಆರ್‌ಎಸ್‌ಎಸ್‌ ಗೋವಾ ಘಟಕದ ಮಾಜಿ ಮುಖ್ಯಸ್ಥ ಸುಭಾಷ್ ವಾಲಿಂಗ್ಕರ್ ಆರೋಪ! ಪರಿಕ್ಕರ್ ಚೇತರಿಸಿಕೊಳ್ಳಲು ಮತ್ತಷ್ಟು ವಿಶ್ರಾಂತಿಯ ಅಗತ್ಯವಿದೆ ಎಂದ ಸುಭಾಷ್! ಗೋವಾ ಹಿಡಿತ ಕೈತಪ್ಪುವ ಭಯದಿಂದ ಪರಿಕ್ಕರ್ ಮೇಲೆ ಬಿಜೆಪಿ ಒತ್ತಡ 

ಅನಾರೋಗ್ಯದಿಂದ ಬಳಲುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಕಚೇರಿಗೆ ಹಾಜರಾಗಿ ಅಧಿಕಾರ ನಡೆಸುವಂತೆ ಬಿಜೆಪಿ ಅನಗತ್ಯ ಒತ್ತಡ ಹೇರುತ್ತಿದೆ ಎಂದು ಗೋವಾ ಆರ್‌ಎಸ್ಎಸ್ ಘಟಕದ ಮಾಜಿ ಅಧ್ಯಕ್ಷ ಸುಭಾಷ್ ವಾಲಿಂಗ್ಕರ್ ಗಂಭೀರ ಆರೋಪ ಮಾಡಿದ್ದಾರೆ.

Add Asianetnews Kannada as a Preferred SourcegooglePreferred

ಪರಿಕ್ಕರ್ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಮತ್ತಷ್ಟು ವಿಶ್ರಾಂತಿ ಅಗತ್ಯವಿದ್ದರೂ, ಅವರ ಮೇಲೆ ಬಿಜೆಪಿ ಹೈಕಮಾಂಡ್ ಅನಗತ್ಯವಾಗಿ ಒತ್ತಡ ಹೇರುತ್ತಿದೆ. ಯಾವುದೇ ಸಂದರ್ಭದಲ್ಲಿಯೂ ಗೋವಾದಲ್ಲಿ ಹಿಡಿತ ಬಿಗಿಗೊಳಿಸಲು ಬಯಸಿರುವ ಬಿಜೆಪಿ, ಕಚೇರಿಕೆ ಹಾಜರಾಗುವಂತೆ ಒತ್ತಡ ಹೇರುತ್ತಿದೆ. ಇದರಿಂದ ಅವರ ಆರೋಗ್ಯ ಮತ್ತಷ್ಟು ಹದಗೆಡುವ ಸಾಧ್ಯತೆಗಳಿವೆ ಎಂದು ಸುಭಾಷ್ ಹೇಳಿದ್ದಾರೆ.

ಪರಿಕ್ಕರ್ ಸಂಪೂರ್ಣವಾಗಿ ಚೇತರಿಸಿಕೊಳ್ಳುವವರೆಗೂ ಕೇಂದ್ರ ಸರ್ಕಾರ ಗೋವಾ ರಾಜ್ಯಕ್ಕೆ ಪರ್ಯಾಯ ಮುಖ್ಯಮಂತ್ರಿ ನೇಮಿಸುವುದು ಸೂಕ್ತ. ಇಲ್ಲದೇ ಹೋದರೆ, ಸರ್ಕಾರ ಹೆಚ್ಚು ಕಾಲ ಉಳಿಯುವುದಿಲ್ಲ. ಶೀಘ್ರದಲ್ಲಿಯೇ ಪತನಗೊಳ್ಳಲಿದೆ ಎಂದು ವಾಲಿಂಗ್ಕರ್ ಎಚ್ಚರಿಕೆ ನೀಡಿದ್ದಾರೆ.