ಬೀದರ್(ಸೆ.16): ಚಲಿಸುತ್ತಿದ್ದ ಬಸ್ಗೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಮೂರು ವರ್ಷದ ಬಾಲಕನೊಬ್ಬ ಸಜೀವ ದಹನವಾದ ಧಾರುಣ ಘಟನೆ ಬೀದರ್ ಜಿಲ್ಲೆ ಹುಮನಾಬಾದ್ ಪಟ್ಟಣದಲ್ಲಿ ನಡೆದಿದೆ.
ಶಿರಡಿಯಿಂದ ಹೈದ್ರಾಬಾದ್'ಗೆ ತೆರಳುತ್ತಿದ್ದ ಸ್ಲೀಪರ್ ಕೋಚ್ ಕಾವೇರಿ ಬಸ್ನಲ್ಲಿ ಈ ಘಟನೆ ನಡೆದಿದೆ. ಹೈದ್ರಾಬಾದ ಮೂಲದ, 3 ವರ್ಷದ ವಿಹಾನ್ ಎಂಬ ಬಾಲಕ ಸಜೀವ ದಹನಗೊಂಡಿದ್ದು, ಘಟನೆಯಲ್ಲಿ ಮೂರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಹುಮ್ನಾಬಾದ್ ಪಟ್ಟಣದ ಹೊರವಲಯದ ಠಾಕೂರ್ ಡಾಬಾ ಸಮಿಪ ಈ ಘಟನೆ ನಡೆದಿದೆ. ಬಸ್ ಸುಟ್ಟು ಕರಕಲಾಗಿದ್ದು, ಭಾರಿ ದುರಂತ ತಪ್ಪಿದೆಯಾದರೂ, ಘಟನೆಯಲ್ಲಿ ಬಾಲಕನ ಸಾವು ಪೋಷಕರನ್ನು ಕಂಗಾಲಾಗಿಸಿದೆ.
