ನಿರ್ಮಾಪಕ ಸುಂದರ್​, ನಿರ್ದೇಶಕ ನಾಗಶೇಖರ್​, ಸಾಹಸ ನಿರ್ದೇಶಕ ರವಿ ವರ್ಮಾ ವಿರುದ್ಧ ಕೇಸ್​​​ದಲಾಗಿದ್ದು, ಒಟ್ಟು ಚಿತ್ರತಂಡದ ವಿರುದ್ಧ ಸೆಕ್ಷನ್​ 188, 304 ರಂತೆ ಕೇಸ್​ ದಾಖಲಿಸಿಕೊಳ್ಳಲಾಗಿದೆ

ಬೆಂಗಳೂರು(ನ.08): ಇಬ್ಬರು ಖಳನಟರ ದುರಂತ ಸಾವಿಗೆ ಕಾರಣದವಾದ ಚಿತ್ರೀಕರಣದಲ್ಲಿ ನಿಯಮ ಉಲ್ಲಂಘನೆ ಕಂಡು ಬಂದಿದ್ದು ಈ ಹಿನ್ನಲೆಯಲ್ಲಿ ನಿರ್ಮಾಪಕ, ನಿರ್ದೇಶಕ, ಸಾಹಸ ನಿರ್ದೇಶಕರ ವಿರುದ್ಧ FIR ದಾಖಲು ಮಾಡಲಾಗಿದೆ. 

ನಿರ್ಮಾಪಕ ಸುಂದರ್​, ನಿರ್ದೇಶಕ ನಾಗಶೇಖರ್​, ಸಾಹಸ ನಿರ್ದೇಶಕ ರವಿ ವರ್ಮಾ ವಿರುದ್ಧ ಕೇಸ್​​​ದಲಾಗಿದ್ದು, ಒಟ್ಟು ಚಿತ್ರತಂಡದ ವಿರುದ್ಧ ಸೆಕ್ಷನ್​ 188, 304 ರಂತೆ ಕೇಸ್​ ದಾಖಲಿಸಿಕೊಳ್ಳಲಾಗಿದೆ

ಸೆಕ್ಷನ್​ 188 ಅಂದರೆ ಷರತ್ತುಗಳನ್ನು ಉಲ್ಲಂಘಿಸಿದ ಆರೋಪವಾಗಿದ್ದು, BWSSB ಅನುಮತಿ ಪತ್ರದಲ್ಲಿ ನಮೂದಿಸಿದ್ದ ಷರತ್ತುಗಳು ಚಿತ್ರತಂಡ ಉಲ್ಲಂಘಿಸಿದೆ. ಸೆಕ್ಷನ್​ 304 ಅಂದರೆ ಉದ್ದೇಶವಿಲ್ಲದೆ ಕೊಲೆಗೈದ ಪ್ರಕರಣವಾಗಿದ್ದು, ಸೆಕ್ಷನ್​ 304ರ ಆರೋಪ ಸಾಬೀತಾದರೆ ಹತ್ತು ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ.