‘ಮಹಾ’ಮೌನಿ ಮೋದಿ ವಿರುದ್ಧ ರೈತರ ಆಕ್ರೋಶ, ಅಣುಕು ಶವಯಾತ್ರೆ
ಮಹದಾಯಿ ಬಗ್ಗೆ ಮಹಾಮೌನ ತಾಳಿದ ಮೋದಿ ಬಗ್ಗೆ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನಾ ನಿರತ ಹೋರಾಟಗಾರರು ಫ್ರಬಾಯಿ ಬಾಯಿ ಬಡಿದುಕೊಂಡು, ಅಣುಕು ಶವಯಾತ್ರೆ ನಡೆಸಿದ್ದಾರೆ.
ಬೆಂಗಳೂರು:ಪರಿವರ್ತನಾ ಯಾತ್ರೆಯ ಸಮಾರೋಪ ಸಮಾವೇಶದಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕರ್ನಾಟಕಕ್ಕೆ ಬಂದರೂ, ಮಹದಾಯಿ ವಿವಾದದ ಬಗ್ಗೆ ಯಾವುದೇ ಪ್ರಸ್ತಾಪ ಮಾಡದಿರುವುದು ರೈತರು ಹಾಗೂ ಹೋರಾಟಗಾರರನ್ನು ರೊಚ್ಚಿಗೆಬ್ಬಿಸಿದೆ.
ಮಹದಾಯಿ ಬಗ್ಗೆ ಮಹಾಮೌನ ತಾಳಿದ ಮೋದಿ ಬಗ್ಗೆ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನಾ ನಿರತ ಹೋರಾಟಗಾರರು ಫ್ರಬಾಯಿ ಬಾಯಿ ಬಡಿದುಕೊಂಡು, ಅಣುಕು ಶವಯಾತ್ರೆ ನಡೆಸಿದ್ದಾರೆ.
ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ಮೋದಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.