ಬೆಂಗಳೂರು(ಸೆ. 13): ಕಾವೇರಿ ವಿಚಾರ ರೈತರಿಗೆ ಡಬಲ್ ಹೊಡೆತ ನೀಡಿದೆ. ನಗರದಲ್ಲಿ ನಡೆಯುತ್ತಿರುವ ಕಾವೇರಿ ಪ್ರತಿಭಟನೆಯ ಕಾವು ರೈತರ ಹೊಟ್ಟೆಗೆ ಹೊಡೆಯುತ್ತಿದೆ. ಬೆಂಗಳೂರಿನಲ್ಲಿ ಬಂದ್ ವಾತಾವರಣವಿರುವುದರಿಂದ ಬಹುತೇಕ ಪ್ರದೇಶಗಳು ಬಿಕೋ ಎನ್ನುತ್ತಿವೆ. ನಗರದ ಮಾರುಕಟ್ಟೆಗಳಲ್ಲಿ ವ್ಯಾಪಾರ ಕುಸಿದುಹೋಗಿದೆ. ರೈತರು ಕಷ್ಟಪಟ್ಟು ಬೆಳೆದ ತರಕಾರಿಗಳನ್ನು ಕೊಳ್ಳುವವರೇ ಇಲ್ಲವಾಗಿದೆ. ಕಿಲೋಗೆ 50-100 ರೂಗಳಿದ್ದ ತರಕಾರಿಗಳ ಬೆಲೆ ಐದತ್ತು ರೂಪಾಯಿಗೆ ಇಳಿದುಹೋಗಿದೆ. ಕೆಲ ರೈತರಂತೂ ಗ್ರಾಹಕರಿಲ್ಲದೇ ತಮ್ಮ ತರಕಾರಿಗಳನ್ನು ಸಿಕ್ಕಸಿಕ್ಕವರಿಗೆ ಉಚಿತವಾಗಿ ಹಂಚುತ್ತಿರುವ ದೃಶ್ಯ ಯಶವಂತಪುರದ ಎಪಿಎಂಸಿ ಯಾರ್ಡ್ ಮಾರುಕಟ್ಟೆಯಲ್ಲಿ ಕಾಣಿಸಿದೆ.