ಅಖಿಲೇಶ್ ವಿರುದ್ಧ ಕುಟುಂಬದಲ್ಲೇ ನಡೆಯುತ್ತಿದೆ ಪಿತೂರಿ
ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ವಿರುದ್ಧ ಅವರ ಮಲತಾಯಿ ಪಿತೂರಿ ನಡೆಸುತ್ತಿದ್ದಾರಂತೆ. ಮುಲಾಯಂ ಸಿಂಗ್ ಸಹೋದರ ಶಿವಪಾಲ್ ಸಿಂಗ್ ಸಹಕಾರದಿಂದ ಅಖಿಲೇಶ್ ಅವರನ್ನು ಮಣಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅಖಿಲೇಶ್ ಬೆಂಬಲಿಗರು ಆರೋಪಿಸುತ್ತಿದ್ದಾರೆ.
ಲಕ್ನೋ(ಅ.22): ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ವಿರುದ್ಧ ಅವರ ಮಲತಾಯಿ ಪಿತೂರಿ ನಡೆಸುತ್ತಿದ್ದಾರಂತೆ. ಮುಲಾಯಂ ಸಿಂಗ್ ಸಹೋದರ ಶಿವಪಾಲ್ ಸಿಂಗ್ ಸಹಕಾರದಿಂದ ಅಖಿಲೇಶ್ ಅವರನ್ನು ಮಣಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅಖಿಲೇಶ್ ಬೆಂಬಲಿಗರು ಆರೋಪಿಸುತ್ತಿದ್ದಾರೆ.
ವಿಧಾನ ಪರಿಷತ್ ಸದಸ್ಯ ಉದಯ್ವೀರ್ ಸಿಂಗ್ ಸಿಎಂ ಅಖಿಲೇಶ್ ಯಾದವ್ ಬೆಂಬಲಕ್ಕೆ ನಿಂತಿದ್ದು, ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಖಿಲೇಶ್ ಅವರ ವಿರುದ್ಧ ಅವರ ಕುಟುಂಬದಲ್ಲೇ ಪಿತೂರಿ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.