ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅನುದಾನ ಪಡೆಯಲು ಕಾರ್ಯಕ್ರಮ ನಡೆಸದೇ ನಕಲಿ ಫೋಟೋ, ನಕಲಿ ಬಿಲ್, ನಕಲಿ ಆಹ್ವಾನ ಪತ್ರಿಕೆ ಸೃಷ್ಟಿಸಿ ಅನುದಾನ ಕಬಳಿಸುವ ಸಂಘ - ಸಂಸ್ಥೆಗಳು ಹುಟ್ಟಿಕೊಂಡಿವೆ. ಹೋಗಲಿ ಈ ನಕಲಿಗಳನ್ನು ಹೇಗೋ ಸುಧಾರಿಸೋಣ ಅಂದರೇ ನಕಲಿ ಸಂಗೀತ ಕಲಾವಿದರೇ ಹುಟ್ಟಿಕೊಳ್ಳೋದೇ? ಎಲ್ಲಿ ಅಂತೀರಾ ಇಲ್ಲಿದೆ ನೋಡಿ

ಶಿವಮೊಗ್ಗ(ಅ.06): ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅನುದಾನ ಪಡೆಯಲು ಕಾರ್ಯಕ್ರಮ ನಡೆಸದೇ ನಕಲಿ ಫೋಟೋ, ನಕಲಿ ಬಿಲ್, ನಕಲಿ ಆಹ್ವಾನ ಪತ್ರಿಕೆ ಸೃಷ್ಟಿಸಿ ಅನುದಾನ ಕಬಳಿಸುವ ಸಂಘ - ಸಂಸ್ಥೆಗಳು ಹುಟ್ಟಿಕೊಂಡಿವೆ. ಹೋಗಲಿ ಈ ನಕಲಿಗಳನ್ನು ಹೇಗೋ ಸುಧಾರಿಸೋಣ ಅಂದರೇ ನಕಲಿ ಸಂಗೀತ ಕಲಾವಿದರೇ ಹುಟ್ಟಿಕೊಳ್ಳೋದೇ? ಎಲ್ಲಿ ಅಂತೀರಾ ಇಲ್ಲಿದೆ ನೋಡಿ

ಸಂಗೀತವೇ ಗೊತ್ತಿಲ್ಲದ ನಕಲಿ ಕಲಾವಿದರು ಬ್ಯಾನರ್ ಮುಂದೆ ಕುಳಿತು ಕ್ಯಾಮರಾಗೆ ಫೋಸ್ ಕೊಟ್ಟು, ನಾವು ಕಲಾವಿದರು, ನಮಗೂ ಸರ್ಕಾರದ ಸಹಾಯಧನ ಕೊಡಿ ಅಂತ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿ ವಂಚಿಸಿದ್ದಾರೆ. ಸಹಾಯಧನ ಪಡೆಯಲೆಂದೇ ನಕಲಿ ಬಿಲ್ ಸೃಷ್ಟಿಸಿ ಕಲೆಗೆ ಕಳಂಕ ತರುವ ಹುನ್ನಾರ ನಡೆಸಿದ್ದಾರೆ.

ಅಲ್ಲದೇ ಖ್ಯಾತ ರಂಗಕರ್ಮಿ ಕೆ.ವಿ.ಸುಬ್ಬಣ್ಣ ಹೆಸರು ಬಳಸಿ ಶಿವಮೊಗ್ಗ, ಶಿಕಾರಿಪುರ, ಸಾಗರ ತಾಲೂಕುಗಳ 6ಕ್ಕೂ ಹೆಚ್ಚು ಸಂಘಟನೆಗಳು ಪ್ರಸಕ್ತ ವರ್ಷ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅರ್ಜಿ ಸಲ್ಲಿಸಿವೆ. ವಾಟ್ಸ್ಯಾಪ್​​, ಪ್ರೆಸ್ ನೋಟ್​​'ಗಳ ಮೂಲಕ ಪತ್ರಿಕೆಗಳಿಗೆ ಕಾರ್ಯಕ್ರಮ ನಡೆದಂತೆ ಸುದ್ದಿ ನೀಡಿ ಕಾರ್ಯಕ್ರಮದ ಬಗ್ಗೆ ಪತ್ರಿಕೆಗಳಲ್ಲೂ ವರದಿಯಾಗುವಂತೆ ನೋಡಿಕೊಂಡು ನಕಲಿ ಸುದ್ದಿ ಸೃಷ್ಟಿಸಿದ್ದವು.

ಒಟ್ಟಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರದ ಸಹಾಯಧನ ವಂಚನೆ ಮಾಡಲು ಮುಂದಾಗಿರುವ ಇಂತಹ ನಕಲಿ ಸಂಸ್ಥೆಗಳು, ನಕಲಿ ಕಲಾವಿದರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಿದೆ.