500 ರೂಪಾಯಿ ಹಾಗೂ 1000 ರೂಪಾಯಿ ನೋಟುಗಳನ್ನು ರದ್ದುಪಡಿಸಿರುವ ನೇರ ಪರಿಣಾಮ ಈಗ ಸಹಕಾರಿ ಬ್ಯಾಂಕ್'ಗಳ ಮೇಲಾಗಿದೆ. ಸಾಲ ಮರುಪಾವತಿಗೆ ಹಳೆಯ ನೋಟುಗಳನ್ನು ಪಡೆಯದಂತೆ ಸಹಕಾರಿ ಮತ್ತು ಡಿಸಿಸಿ ಬ್ಯಾಂಕ್ಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಇದರಿಂದ ಬ್ಯಾಂಕ್ಗಳ ವಹಿವಾಟಿಗೆ ತೊಂದರೆ ಉಂಟಾಗಿದೆ.
ನವದೆಹಲಿ(ನ.16): 500 ರೂಪಾಯಿ ಹಾಗೂ 1000 ರೂಪಾಯಿ ನೋಟುಗಳನ್ನು ರದ್ದುಪಡಿಸಿರುವ ನೇರ ಪರಿಣಾಮ ಈಗ ಸಹಕಾರಿ ಬ್ಯಾಂಕ್'ಗಳ ಮೇಲಾಗಿದೆ. ಸಾಲ ಮರುಪಾವತಿಗೆ ಹಳೆಯ ನೋಟುಗಳನ್ನು ಪಡೆಯದಂತೆ ಸಹಕಾರಿ ಮತ್ತು ಡಿಸಿಸಿ ಬ್ಯಾಂಕ್ಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಇದರಿಂದ ಬ್ಯಾಂಕ್ಗಳ ವಹಿವಾಟಿಗೆ ತೊಂದರೆ ಉಂಟಾಗಿದೆ.
ನವೆಂಬರ್ 24ರವರೆಗೂ ಆಸ್ಪತ್ರೆ, ಮೆಡಿಕಲ್, ಪೆಟ್ರೋಲ್ ಬಂಕ್, ರೈಲ್ವೇ, ಸಾರಿಗೆ ಇಲ್ಲೆಲ್ಲ ಹಳೇ ನೋಡು ಪಡೆಯಬೇಕೆಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಆದರೆ, ರೈತರ ಆಧಾರಿತ ಸಹಕಾರಿ ಬ್ಯಾಂಕ್'ಗಳಲ್ಲಿ ಮಾತ್ರ ಈ ನೋಟು ತೆಗೆದುಕೊಳ್ಳುವಂತಿಲ್ಲ. ಸಹಕಾರಿ ಬ್ಯಾಂಕ್'ಗಳಲ್ಲಿ ಹಳೆಯ ನೋಟುಗಳನ್ನು ಡೆಪಾಸಿಟ್ ಮಾಡಿಕೊಳ್ಳಬಾರದು ಮತ್ತು ಹಳೆಯ ನೋಟುಗಳ ಮೂಲಕ ಸಾಲ ಮರುಪಾವತಿ ಮಾಡಿಸಿಕೊಳ್ಳಬಾರದು ಎಂದು ರಿಸರ್ವ್ ಬ್ಯಾಂಕ್ ಸುತ್ತೋಲೆ ಹೊರಡಿಸಿದ್ದು, ರೈತರು ಹಾಗೂ ಸಹಕಾರಿ ಬ್ಯಾಂಕ್'ಗಳು ಕಂಗಾಲಾಗುವಂತೆ ಮಾಡಿದೆ.
ಕಪ್ಪು ಹಣ ಸಹಕಾರಿ ಬ್ಯಾಂಕ್ ಸೇರುತ್ತಿದೆ ಎಂಬ ಗುಮಾನಿ: ಸಹಕಾರಿ ಬ್ಯಾಂಕ್ಗಳಲ್ಲಿ ಹಳೇ ನೋಟು ಚಲಾವಣೆ ರದ್ದು
ರಾಷ್ಟ್ರೀಕೃತ ಬ್ಯಾಂಕ್'ಗಳಲ್ಲಿ ಹಳೆಯ ನೋಟುಗಳನ್ನು ಪಡೆಯುವ ವ್ಯವಸ್ಥೆಯಿಂದ ಸಹಕಾರಿ ಬ್ಯಾಂಕ್ಗಳನ್ನ ಹೊರಗಿಟ್ಟಿದ್ದು ಯಾಕೆ ಎನ್ನುವ ಪ್ರಶ್ನೆ ಎದುರಾಗುತ್ತದೆ. ಬಹುಶಃ ಕಪ್ಪು ಹಣ ಸಹಕಾರಿ ಬ್ಯಾಂಕ್ ಸೇರುತ್ತಿದೆ ಎಂಬ ಗುಮಾನಿಯಿಂದ ರಿಸರ್ವ್ ಬ್ಯಾಂಕ್ ಇಂಥಹುದ್ದೊಂದು ಸುತ್ತೋಲೆ ಹೊರಡಿಸಿರಬಹುದು. ಆದರೆ, ಕೇಂದ್ರದ ಈ ನಿರ್ಧಾರದಿಂದ ವ್ಯವಹಾರಕ್ಕೆ ತೊಂದರೆ ಆಗಿದೆ ಎನ್ನುವುದು ರಾಜ್ಯ ಸಹಕಾರ ಸಚಿವರ ವಾದ.
ಒಟ್ಟಾರೆ, ಸಾವಿರ, ಐದುನೂರು ರೂಪಾಯಿ ಹಳೇ ನೋಟು ಬ್ಯಾನ್'ನಿಂದ ಜನ ಎಟಿಎಂಗಳ ಎದುರು ಕ್ಯೂ ನಿಲ್ಲುವ ಸಂಕಷ್ಟ. ಆದರೆ, ಸಹಕಾರ ಬ್ಯಾಂಕ್'ಗಳಲ್ಲೂ ಹಳೇ ನೋಟು ಚಲಾವಣೆಕಳೆದುಕೊಂಡಿದ್ದು ರೈತರು ಹಾಗೂ ಸಹಕಾರಿ ಬ್ಯಾಂಕ್ಗಳ ನಿದ್ದೆಗೆಡಿಸಿದ್ದಂತೂ ಸತ್ಯ.
