Asianet Suvarna News Asianet Suvarna News

ಮಾಲ್ಡೀವ್ಸ್ ಮಾಜಿ ಉಪಾಧ್ಯಕ್ಷ ಭಾರತಕ್ಕೆ ಬಂದಿದ್ದು ರಾಜಕೀಯ ಆಶ್ರಯ ಕೋರಿ!

ಮಾಲ್ಡೀವ್ಸ್ ಮಾಜಿ ಉಪಾಧ್ಯಕ್ಷ ಭಾರತಕ್ಕೆ ಬಂದಿದ್ದು ರಾಜಕೀಯ ಆಶ್ರಯ ಕೋರಿ| ಕೋರಿಕೆ ತಿರಸ್ಕರಿಸಿ ಮರಳಿ ಕಳುಹಿಸಿದ ಭಾರತ

Ex Maldives Vice President Who Sought Asylum In India Arrested
Author
Bangalore, First Published Aug 4, 2019, 11:07 AM IST

ತೂತ್ತುಕುಡಿ[ಆ.04]: ಯಾವುದೇ ಪೂರ್ವ ಮಾಹಿತಿ ನೀಡದೆ ಜಲ ಮಾರ್ಗ​ವಾಗಿ ಗುರು​ವಾರ ಭಾರ​ತಕ್ಕೆ ಬಂದಿದ್ದ, ಮಾಲ್ಡೀವ್ಸ್‌ನ ಮಾಜಿ ಉಪಾ​ಧ್ಯ​ಕ್ಷ​ ಅಹ್ಮದ್‌ ಅದೀಬ್‌ ಅಬ್ದುಲ್‌ ಗಫೂರ್‌ನನ್ನು ಭಾರತ ಮರಳಿ ಕಳು​ಹಿ​ಸಿದೆ. ಅವರು ರಾಜ​ಕೀಯ ಆಶ್ರಯ ಕೋರಿ ಭಾರ​ತಕ್ಕೆ ಬಂದಿ​ದ್ದರು, ಆದರೆ ಅವರ ಮನ​ವಿ​ಯ​ನ್ನು ತಿರ​ಸ್ಕ​ರಿ​ಸಿ ಮರಳಿ ಕಳು​ಹಿ​ಸ​ಲಾ​ಗಿದೆ ಎಂದು ಪೊಲೀ​ಸರು ತಿಳಿ​ಸಿ​ದ್ದಾರೆ.

ಯಾವುದೇ ದಾಖಲೆಗಳು ಇಲ್ಲದೆ ಒಂಭತ್ತು ಸಿಬ್ಬಂದಿ​ಗ​ಳೊಂದಿಗೆ ಸರಕು ಹಡ​ಗಿ​ನಲ್ಲಿ ಅಕ್ರ​ಮ​ವಾಗಿ ಭಾರ​ತಕ್ಕೆ ಪ್ರವೇಶ ಮಾಡಿದ್ದ ಅದೀ​ಬ್‌​ರನ್ನು ಹಡ​ಗಿ​ನಿಂದ ಇಳಿ​ಯಲು ಅವ​ಕಾಶ ಕೊಡದೇ ವಿಚಾ​ರಣೆ ನಡೆ​ಸ​ಲಾ​ಗಿತ್ತು. ವಿವಿಧ ಕೇಂದ್ರ ತನಿಖಾ ಸಂಸ್ಥೆ​ಗ​ಳೂ ಅದೀ​ಬ್‌​ರನ್ನು ತೀವ್ರ ವಿಚಾ​ರ​ಣೆಗೆ ಗುರಿ​ಪ​ಡಿ​ಸಿತ್ತು.

ಅದೀ​ಬ್‌​ರನ್ನು ಅದೇ ಹಡ​ಗಿ​ನಲ್ಲಿ ಅವ​ರನ್ನು ಹಿಂದು​ರು​ಗಿ​ಸ​ಲಾ​ಗಿದ್ದು, ಶುಕ್ರ​ವಾರ ಮಧ್ಯ​ರಾತ್ರಿ ಅವರು ತೂತ್ತುಕುಡಿಯಿಂದ ಮಾಲ್ಡೀ​ವ್ಸ್ಗೆ ಪ್ರಯಾಣ ಬೆಳೆ​ಸಿ​ದ್ದಾರೆ. ಕರಾ​ವಳಿ ರಕ್ಷಣಾ ಪಡೆ​ಗಳು ಭಾರ​ತೀಯ ಜಲ​ಸೀಮೆ ದಾಟು​ವ​ವ​ರೆಗೆ ನಿಗಾ ವಹಿ​ಸಿ​ತ್ತು ಎಂದು ಪೊಲೀಸ್‌ ಮೂಲಗಳು ತಿಳಿ​ಸಿವೆ. ಅದೀ​ಬ್‌ಗೆ ಮಾಲ್ಡೀ​ವ್‌್ಸ​ನಲ್ಲಿ ಜೀವ​ಬೆ​ದ​ರಿಕೆ ಇರು​ವು​ದ​ರಿಂದ ರಾಜ​ಕೀಯ ಆಶ್ರಯ ಕೋರಿ ಭಾರ​ತ​ಕ್ಕೆ ಬಂದಿ​ದ್ದರು ಎಂದು ಅದೀಬ್‌ ಪರ ವಕೀಲ ಹೇಳಿ​ದ್ದಾ​ನೆ.

Follow Us:
Download App:
  • android
  • ios