Asianet Suvarna News Asianet Suvarna News

ಕಾಂಗ್ರೆಸ್ ತೊರೆದ ನಾಯಕಗೆ ಸಿಕ್ತು ಸಚಿವ ಸ್ಥಾನ

ಕಾಂಗ್ರೆಸ್ ತೊರೆದು ಪಕ್ಷಾಂತರ ಮಾಡಿದ್ದ ಮುಖಂಡನೋರ್ವಗೆ ಇದೀಗ ಸಚಿವ ಸ್ಥಾನ ದೊರಕಿದೆ. ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.

Ex Cong leader Vikhe Patil sworn in as Maharashtra minister
Author
Bengaluru, First Published Jun 17, 2019, 11:24 AM IST

ಮುಂಬೈ (ಜೂ.17): ದೇವೇಂದ್ರ ಫಡ್ನವೀಸ್‌ ನೇತೃತ್ವದ ಮಹಾರಾಷ್ಟ್ರದ ಬಿಜೆಪಿ ಸರ್ಕಾರದ ಸಚಿವ ಸಂಪುಟ ಭಾನುವಾರ ವಿಸ್ತರಣೆಯಾಗಿದೆ. 

ಕ್ಯಾಬಿನೆಟ್‌ ಸಚಿವರಾಗಿ ರಾಧಾಕೃಷ್ಣ ವಿಖೆ ಪಾಟೀಲ್‌, ಮುಂಬೈ ಬಿಜೆಪಿ ಮುಖ್ಯಸ್ಥ ಆಶಿಶ್‌ ಶೆಲ್ಲರ್‌ ಸೇರಿದಂತೆ 3 ಜನರು ಅಧಿಕಾರ ಸ್ವೀಕರಿಸಿದರು. ವಿಪಕ್ಷ ನಾಯಕರಾಗಿದ್ದ ರಾಧಾಕೃಷ್ಣ ವಿಖೆ ಪಾಟೀಲ್‌ ಕಾಂಗ್ರೆಸ್‌ ತ್ಯಜಿಸಿ ಇತ್ತೀಚಿಗೆ ಬಿಜೆಪಿ ಸೇರ್ಪಡೆಯಾಗಿದ್ದರು. 

ಇವರ ಜತೆಗೆ 5 ಜನ ಸಹಾಯಕ ಸಚಿವರು ಸೇರಿದಂತೆ ಎಂಟು ಜನರು ಸಚಿವ ಸಂಪುಟದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಸೋಮವಾರದಿಂದ ಫಡ್ನವೀಸ್‌ ಸರ್ಕಾರದ ಅಧಿವೇಶನ ಸಹ ಆರಂಭಗೊಳ್ಳುವ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ಕೈಗೊಳ್ಳಲಾಗಿದೆ. ಪ್ರಸ್ತುತ ಬಿಜೆಪಿ ಸರ್ಕಾರದ ಅವಧಿ ಕೇವಲ 4 ತಿಂಗಳಿದೆ.

Follow Us:
Download App:
  • android
  • ios