'ಬಿಎಸ್ವೈ ಸಿಎಂ ಆದರೂ ಗೊಂದಲ ನಿಲ್ಲದು'
ಬಿಎಸ್ವೈ ಸಿಎಂ ಆದರೂ ಗೊಂದಲ ನಿಲ್ಲದು: ಶ್ರೀಶೈಲ ಜಗದ್ಗುರು ಡಾ.ಶ್ರೀಚನ್ನಸಿದ್ದರಾಮ ಸ್ವಾಮೀ
ಹಾಸನ[ಜು.19]: ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾದರೂ ಗೊಂದಲಗಳು ಇದ್ದೇ ಇರುತ್ತವೆ ಎಂದು ಶ್ರೀಶೈಲ ಜಗದ್ಗುರು ಡಾ.ಶ್ರೀಚನ್ನಸಿದ್ದರಾಮ ಸ್ವಾಮೀಜಿ ಹೇಳಿದ್ದಾರೆ.
ಹಾಸನ ಜಿಲ್ಲೆಯ ನುಗ್ಗೇಹಳ್ಳಿಯ ಪುರವರ್ಗ ಹಿರೇಮಠಕ್ಕೆ ಗುರುವಾರ ಭೇಟಿ ನೀಡಿ ಮಾತನಾಡಿದ ಅವರು, ರಾಜ್ಯದ ಮತದಾರರು ಯಾವ ಪಕ್ಷಕ್ಕೂ ಬಹುಮತ ನೀಡಿಲ್ಲ. ಇದರಿಂದ ರಾಜಕೀಯ ಏರುಪೇರು ಉಂಟಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದರೂ ಸಹ ಅವರ ಸರ್ಕಾರಕ್ಕೂ ಅನೇಕ ಗೊಂದಲಗಳು ಉಂಟಾಗಲಿವೆ. ಯಾವುದೇ ಸರ್ಕಾರ ಬಂದರೂ ರಾಜ್ಯದ ಜನರ ಹಿತಾಸಕ್ತಿಗೆ ಅನುಗುಣವಾಗಿ ಅಧಿಕಾರ ನಡೆಸಬೇಕು ಎಂದಿದ್ದಾರೆ.
ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇಷ್ಟೇ ಅಲ್ಲದೇ ಈ ವರ್ಷ ರಾಜ್ಯದಲ್ಲಿ ಉತ್ತಮ ಮಳೆಯಾಗಿ ರಾಜ್ಯದ ಎಲ್ಲ ಜಲಾಶಯ ತುಂಬಲಿವೆ. ರೈತರು ಉತ್ತಮ ಫಸಲು ಪಡೆಯಲಿದ್ದಾರೆ. ಚಂದ್ರಗ್ರಹಣದಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದರು