ಇಂದು ನಡೆದ ವಿಶ್ವಾಸ ಮತ ಯಾಚನೆಯಲ್ಲಿ ---- ಪಡೆಯುವ ಮೂಲಕ ಶಶಿಕಲಾ ಆಪ್ತ ಪಳನಿಸ್ವಾಮಿ ತಮಿಳುನಾಡಿನ ಮುಂದಿನ ಮುಖ್ಯಮಂತ್ರಿ ತಾನೇ ಎಮದು ಸಾಬೀತು ಪಡಿಸಿದ್ದಾರೆ.

ಚೆನ್ನೈ (ಫೆ. 18): ತಮಿಳುನಾಡು ವಿಧಾನಸಭೆ ಇಂದು ರೋಚಕ ಹಣಾಹಣಿಗೆ ಸಾಕ್ಷಿಯಾಯಿತು. ತಮಿಳುನಾಡು ಸಿಎಂ ಆಗಿ ಗುರುವಾರ ಪ್ರಮಾಣವಚನ ಸ್ವೀಕರಿಸಿರುವ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ವಿಧಾನಸಭೆಯಲ್ಲಿ ಇಂದು ವಿಶ್ವಾಸಮತ ಯಾಚನೆಯಲ್ಲಿ ಯಶಸ್ವಿಯಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಮಿಳುನಾಡು ವಿಧಾನಸಭೆಯಲ್ಲಿಂದು ನಡೆದ ವಿಶ್ವಾಸಮತ ಯಾಚನೆಯಲ್ಲಿ ___ ಪಡೆಯುವ ಮೂಲಕ ಇ.ಪಳನಿಸ್ವಾಮಿ ಮುಖ್ಯಮಂತ್ರಿ ಗಾದಿಯನ್ನು ಸುಭದ್ರಪಡಿಸಿಕೊಂಡಿದ್ದಾರೆ.

234 ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಲು ಪಳನಿ ಅವರಿಗೆ ಕನಿಷ್ಠ 117 ಶಾಸಕರ ಬೆಂಬಲ ಸಾಬೀತು ಪಡಿಸಬೇಕಿತ್ತು.

ಡಿಎಂಕೆ ಹಾಗೂ ಕಾಂಗ್ರೆಸ್ ಪಕ್ಷಗಳು ಪಳನಿಸ್ವಾಮಿ ವಿರುದ್ಧ ಮತ ಚಲಾಯಿಸುವುದಾಗಿ ಈ ಮುಂಚೆಯೇ ನಿರ್ಧರಿಸಿದ್ದುವು.

ಮಾಧ್ಯಮಗಳಿಗೆ ನಿಷೇಧ:

ವಿಶ್ವಾಸಮತ ಯಾಚನೆಯ ವರದಿಗೆ ತೆರಳಿದ್ದ ಮಾಧ್ಯಮಗಳಿಗೆ ನಿಷೇಧ ಹೇರಲಾಗಿತ್ತು. ಈ ವಿಚಾರವಾಗಿ ಪೊಲೀಸರು ಹಾಗೂ ಪತ್ರಕರ್ತರ ನಡುವೆ ವಾಗ್ವಾದ ನಡೆಯಿತು.

30 ವರ್ಷಗಳ ಬಳಿಕ ವಿಶ್ವಾಸಮತ:

ತಮಿಳುನಾಡುವಿಧಾನಸಭೆಯಲ್ಲಿವಿಶ್ವಾಸಮತಯಾಚನೆನಡೆದದ್ದುಕಳೆದ 30 ವರ್ಷಗಳಲ್ಲಿಇದೇಮೊದಲು. 1988, ಜನವರಿ 27ರಂದುಜಾನಕಿರಾಮಚಂದ್ರನ್ವಿಶ್ವಾಸಮತಎದುರಿಸಿ, ಗದ್ದಲದನಡುವೆಜಾನಕಿರಾಮಚಂದ್ರನ್​​ ಗೆದ್ದಿದ್ದರು. ಆದರೆಎರಡೇದಿನಗಳಲ್ಲಿಜಾನಕಿನೇತೃತ್ವದಸರ್ಕಾರವನ್ನುಅಂದಿನಪ್ರಧಾನಿರಾಜೀವ್ಗಾಂಧಿಕೇಂದ್ರಸರ್ಕಾರವಜಾಮಾಡಿತ್ತು.

ಬಿಗಿ ಭದ್ರತೆ:

ರಾಜ್ಯದಲ್ಲಿ ಸಂಭವಿಸುತ್ತಿರುವ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರುರಾಜ್ಯಾದ್ಯಂತಬಿಗಿಭದ್ರತೆಏರ್ಪಡಿಸಿದ್ದಾರೆ.