ಇಂದು ನಡೆದ ವಿಶ್ವಾಸ ಮತ ಯಾಚನೆಯಲ್ಲಿ ---- ಪಡೆಯುವ ಮೂಲಕ ಶಶಿಕಲಾ ಆಪ್ತ ಪಳನಿಸ್ವಾಮಿ ತಮಿಳುನಾಡಿನ ಮುಂದಿನ ಮುಖ್ಯಮಂತ್ರಿ ತಾನೇ ಎಮದು ಸಾಬೀತು ಪಡಿಸಿದ್ದಾರೆ.
ಚೆನ್ನೈ (ಫೆ. 18): ತಮಿಳುನಾಡು ವಿಧಾನಸಭೆ ಇಂದು ರೋಚಕ ಹಣಾಹಣಿಗೆ ಸಾಕ್ಷಿಯಾಯಿತು. ತಮಿಳುನಾಡು ಸಿಎಂ ಆಗಿ ಗುರುವಾರ ಪ್ರಮಾಣವಚನ ಸ್ವೀಕರಿಸಿರುವ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ವಿಧಾನಸಭೆಯಲ್ಲಿ ಇಂದು ವಿಶ್ವಾಸಮತ ಯಾಚನೆಯಲ್ಲಿ ಯಶಸ್ವಿಯಾಗಿದ್ದಾರೆ.
ತಮಿಳುನಾಡು ವಿಧಾನಸಭೆಯಲ್ಲಿಂದು ನಡೆದ ವಿಶ್ವಾಸಮತ ಯಾಚನೆಯಲ್ಲಿ ___ ಪಡೆಯುವ ಮೂಲಕ ಇ.ಪಳನಿಸ್ವಾಮಿ ಮುಖ್ಯಮಂತ್ರಿ ಗಾದಿಯನ್ನು ಸುಭದ್ರಪಡಿಸಿಕೊಂಡಿದ್ದಾರೆ.
234 ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಲು ಪಳನಿ ಅವರಿಗೆ ಕನಿಷ್ಠ 117 ಶಾಸಕರ ಬೆಂಬಲ ಸಾಬೀತು ಪಡಿಸಬೇಕಿತ್ತು.
ಡಿಎಂಕೆ ಹಾಗೂ ಕಾಂಗ್ರೆಸ್ ಪಕ್ಷಗಳು ಪಳನಿಸ್ವಾಮಿ ವಿರುದ್ಧ ಮತ ಚಲಾಯಿಸುವುದಾಗಿ ಈ ಮುಂಚೆಯೇ ನಿರ್ಧರಿಸಿದ್ದುವು.
ಮಾಧ್ಯಮಗಳಿಗೆ ನಿಷೇಧ:
ವಿಶ್ವಾಸಮತ ಯಾಚನೆಯ ವರದಿಗೆ ತೆರಳಿದ್ದ ಮಾಧ್ಯಮಗಳಿಗೆ ನಿಷೇಧ ಹೇರಲಾಗಿತ್ತು. ಈ ವಿಚಾರವಾಗಿ ಪೊಲೀಸರು ಹಾಗೂ ಪತ್ರಕರ್ತರ ನಡುವೆ ವಾಗ್ವಾದ ನಡೆಯಿತು.
30 ವರ್ಷಗಳ ಬಳಿಕ ವಿಶ್ವಾಸಮತ:
ತಮಿಳುನಾಡುವಿಧಾನಸಭೆಯಲ್ಲಿವಿಶ್ವಾಸಮತಯಾಚನೆನಡೆದದ್ದುಕಳೆದ 30 ವರ್ಷಗಳಲ್ಲಿಇದೇಮೊದಲು. 1988, ಜನವರಿ 27ರಂದುಜಾನಕಿರಾಮಚಂದ್ರನ್ವಿಶ್ವಾಸಮತಎದುರಿಸಿ, ಗದ್ದಲದನಡುವೆಜಾನಕಿರಾಮಚಂದ್ರನ್ ಗೆದ್ದಿದ್ದರು. ಆದರೆಎರಡೇದಿನಗಳಲ್ಲಿಜಾನಕಿನೇತೃತ್ವದಸರ್ಕಾರವನ್ನುಅಂದಿನಪ್ರಧಾನಿರಾಜೀವ್ಗಾಂಧಿಕೇಂದ್ರಸರ್ಕಾರವಜಾಮಾಡಿತ್ತು.
ಬಿಗಿ ಭದ್ರತೆ:
ರಾಜ್ಯದಲ್ಲಿ ಸಂಭವಿಸುತ್ತಿರುವ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರುರಾಜ್ಯಾದ್ಯಂತಬಿಗಿಭದ್ರತೆಏರ್ಪಡಿಸಿದ್ದಾರೆ.
