ನಿನ್ನೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಪಳನಿಸ್ವಾಮಿ ಇಂದು ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡುವರಿದ್ದರು.

ಚೆನ್ನೈ (ಫೆ.17): ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿರುವ ಅಣ್ಣಾ ಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಅವರನ್ನು ಭೇಟಿ ಮಾಡದೇ ಇರಲು ತಮಿಳುನಾಡು ನೂತನ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ನಿರ್ಧಾರಿಸಿದ್ದಾರೆಂದು ತಿಳಿದು ಬಂದಿದೆ.

Add Asianetnews Kannada as a Preferred SourcegooglePreferred

ನಿನ್ನೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಪಳನಿಸ್ವಾಮಿ ಇಂದು ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡುವರಿದ್ದರು.

ಕಾನೂನು ತಜ್ಞರ ಸಲಹೆಯ ಮೇರೆಗೆ ಪಳನಿಸ್ವಾಮಿ ಭೇಟಿ ಕಾರ್ಯಕ್ರಮಲ್ಲಿ ರದ್ದು ಪಡಿಸಿದ್ದಾರೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಮುಖ್ಯಮಂತ್ರಿ ಅಪರಾಧಿಯೋರ್ವರನ್ನು ಜೈಲಿಗೆ ತೆರಳಿ ಭೇಟಿ ಮಾಡುವುದು ತಪ್ಪು ಎಂಬ ಕಾನೂನು ಸಲಹೆ ಕಾರಣದಿಂದಾಗಿ ಶಶಿಕಲಾ ಭೇಟಿ ಮಾಡದೇ ಇರಲು ಪಳನಿಸ್ವಾಮಿ ನಿರ್ಧಾರಿಸಿದ್ದಾರೆ.