ಕಾವೇರಿ ನ್ಯಾಯಾಧಿಕರಣದ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್'​ನಲ್ಲಿ ಮೂರು ರಾಜ್ಯಗಳು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ಗಳ ಸಿಂಧುತ್ವದ ತೀರ್ಪು ಇಂದು ಹೊರಬೀಳಲಿದೆ. ಕರ್ನಾಟಕ, ತಮಿಳುನಾಡು, ಕೇರಳ ಸರ್ಕಾರಗಳು ಮೇಲ್ಮನವಿ ಅರ್ಜಿಗಳನ್ನು ಸಲ್ಲಿಸಿದ್ದವು. ಅಕ್ಟೋಬರ್​ 19ರಂದು ಅರ್ಜಿಗಳನ್ನು ಸ್ವೀಕರಿಸಬೇಕೋ ಬೇಡವೋ, ಅಂದರೆ ಸಿಂಧುತ್ವದ ಬಗ್ಗೆ  ವಿಚಾರಣೆ ನಡೆದಿತ್ತು. ಬಳಿಕ ಸುಪ್ರೀಂಕೋರ್ಟ್  ಸಿಂಧುತ್ವದ ಬಗೆಗಿನ ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು. ಇನ್ನೂ ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೋರ್ಟ್​ಗೆ ಹೆಚ್ಚುವರಿ ಲಿಖಿತ ಅಫಿಡೆವಿಟ್ ಸಲ್ಲಿಸುವ ಸಾಧ್ಯತೆ ಇದೆ.

ನವದೆಹಲಿ(ಅ.24): ಕಾವೇರಿ ನ್ಯಾಯಾಧಿಕರಣದ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್'​ನಲ್ಲಿ ಮೂರು ರಾಜ್ಯಗಳು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ಗಳ ಸಿಂಧುತ್ವದ ತೀರ್ಪು ಇಂದು ಹೊರಬೀಳಲಿದೆ. ಕರ್ನಾಟಕ, ತಮಿಳುನಾಡು, ಕೇರಳ ಸರ್ಕಾರಗಳು ಮೇಲ್ಮನವಿ ಅರ್ಜಿಗಳನ್ನು ಸಲ್ಲಿಸಿದ್ದವು. ಅಕ್ಟೋಬರ್​ 19ರಂದು ಅರ್ಜಿಗಳನ್ನು ಸ್ವೀಕರಿಸಬೇಕೋ ಬೇಡವೋ, ಅಂದರೆ ಸಿಂಧುತ್ವದ ಬಗ್ಗೆ ವಿಚಾರಣೆ ನಡೆದಿತ್ತು. ಬಳಿಕ ಸುಪ್ರೀಂಕೋರ್ಟ್ ಸಿಂಧುತ್ವದ ಬಗೆಗಿನ ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು. ಇನ್ನೂ ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೋರ್ಟ್​ಗೆ ಹೆಚ್ಚುವರಿ ಲಿಖಿತ ಅಫಿಡೆವಿಟ್ ಸಲ್ಲಿಸುವ ಸಾಧ್ಯತೆ ಇದೆ.

ಮತ್ತೆ ನೀರು ಬಿಡಲು ಆದೇಶಿಸಿದರೆ ಸಿಎಂ ಜೈಲಿಗೆ ಹೋಗಲು ಸಿದ್ಧರಾಗಲಿ

ಇನ್ನೂ ಅಕ್ಟೋಬರ್ 19ರಂದು ಮೇಲ್ಮನವಿ ಸಿಂಧುತ್ವದ ತೀರ್ಪು ಇಂದಿಗೆ ಕಾಯ್ದಿರಿಸಿದ ಸುಪ್ರೀಂಕೋರ್ಟ್​, ಮುಂದಿನ ಆದೇಶದವರೆಗೆ ತಮಿಳುನಾಡಿಗೆ ನಿತ್ಯವೂ 2 ಸಾವಿರ ಕ್ಯೂಸೆಕ್ ನೀರು ಬಿಡುವಂತೆಯೂ ಆದೇಶ ನೀಡಿತ್ತು. ಅದನ್ನು ಪಾಲಿಸಲಾಗುತ್ತಿದೆ. ಸುಪ್ರೀಂಕೋರ್ಟ್​ ಇವತ್ತು ಕೂಡ ನೀರು ಬಿಡಲು ಆದೇಶ ನೀಡಿದರೆ ಸರ್ಕಾರ ಅದನ್ನು ಪಾಲಿಸಲು ಮುಂದಾಗಬಾರದು. ಸಿಎಂ ಸಿದ್ದರಾಮಯ್ಯ ಬಟ್ಟೆ -ಬರೆ ಕಟ್ಟಿಕೊಂಡು ಜೈಲಿಗೆ ಹೋಗಲು ಸಿದ್ಧಾವಾಗಬೇಕು ಎಂದು ರೈತ ಮುಖಂಡ, ಶಾಸಕ ಪುಟ್ಟಣ್ಣಯ್ಯ ಹೇಳಿದ್ದಾರೆ.

ಒಟ್ಟಿನಲ್ಲಿ ಕಾವೇರಿ ವಿಚಾರಣೆ ಬಂದಗಲೆಲ್ಲ ಕಾವೇರಿ ಕೊಳ್ಳದ ರೈತರ ಎದೆಯಲ್ಲಿ ಢವಢವ ಶುರುವಾಗುತ್ತೆ.. ಹೀಗಾಗೇ ಇವತ್ತಿನ ತೀರ್ಪಿನತ್ತ ರೈತರ ಚಿತ್ತ ನೆಟ್ಟಿದೆ.