ತಮಿಳುನಾಡಿನ ತಿರುಚ್ಚಿ ಮೂಲದ ಎಂಜಿನಿಯರ್‌ ದುಬೈನಿಂದ ಜೆಟ್‌ ಏರ್‌ವೇಸ್‌ ವಿಮಾನದ ಮೂಲಕ ಬೆಂಗಳೂರು ವಿಮಾನದ ನಿಲ್ದಾಣದಲ್ಲಿ ಇಳಿದಿದ್ದ. ಶಂಕಿತನ ಪಾಸ್‌ಪೋರ್ಟ್‌ನಲ್ಲಿ ಹಿಂದು ಹೆಸರಿದ್ದು, ಆತನ ಉಡುಗೆ-ತೊಡಗೆ ಮುಸ್ಲಿಂ ವ್ಯಕ್ತಿಗಳ ರೀತಿ ಇತ್ತು.

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣದಲ್ಲಿ ಬಂದಿಳಿದ ಯುವಕನೊಬ್ಬನನ್ನು ಐಸಿಸ್‌ ನಂಟು ಹೊಂದಿದ್ದಾನೆ ಎಂಬ ಶಂಕೆಯ ಮೇರೆಗೆ ಗುಪ್ತಚರ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದ್ದಾರೆ.

ತಮಿಳುನಾಡಿನ ತಿರುಚ್ಚಿ ಮೂಲದ ಎಂಜಿನಿಯರ್‌ ದುಬೈನಿಂದ ಜೆಟ್‌ ಏರ್‌ವೇಸ್‌ ವಿಮಾನದ ಮೂಲಕ ಬೆಂಗಳೂರು ವಿಮಾನದ ನಿಲ್ದಾಣದಲ್ಲಿ ಇಳಿದಿದ್ದ. ಶಂಕಿತನ ಪಾಸ್‌ಪೋರ್ಟ್‌ನಲ್ಲಿ ಹಿಂದು ಹೆಸರಿದ್ದು, ಆತನ ಉಡುಗೆ-ತೊಡಗೆ ಮುಸ್ಲಿಂ ವ್ಯಕ್ತಿಗಳ ರೀತಿ ಇತ್ತು. ಹೀಗಾಗಿ ಅನುಮಾನಗೊಂಡು ಗುಪ್ತಚರ ಸಿಬ್ಬಂದಿ ಆತನ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು.

ಹಿಂದು ಧರ್ಮದ ಬ್ರಾಹ್ಮಣ ಸಮುದಾಯದ ವ್ಯಕ್ತಿ ಕಳೆದ ಆರು ತಿಂಗಳ ಹಿಂದೆ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದ. ಇದರಿಂದ ಆತನ ಉಡುಗೆ-ತೊಡುಗೆ ಮುಸ್ಲಿಂರಂತೆ ಇತ್ತು. ವಿಚಾರಣೆಗೆ ಒಳಪಡಿಸಿದ ಬಳಿಕ ಸತ್ಯಾಂಶ ತಿಳಿದ ಮೇಲೆ ಬಿಡುಗಡೆಗೊಳಿಸಲಾಯಿತು ಎಂದು ವಿಮಾನನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.