ಮಹಾನಗರ ಪಾಲಿಕೆ ಪ್ರತಿ ವರ್ಷದಂತೆ ಸಕ್ರೆಬೈಲು ಆನೆ ಬಿಡಾರದಿಂದ ಮೂರು ಆನೆಗಳನ್ನು ದಸರಾ ಮೆರವಣಿಗೆಯಲ್ಲಿ ಅಂಬಾರಿ ಹೊರಲು ಕರೆ ತರಲಾಗುತ್ತಿತ್ತು. ಹಾಗೆಯೇ ಈ ಬಾರಿಯ ಕೂಡ ಬಿಡಾರದಿಂದ ಮೂರು ಆನೆಗಳನ್ನು ಸಿದ್ಧಗೊಳಿಸಲಾಗಿದೆ.  ಆದರೆ ವಿಜಯದಶಮಿಗೂ ಮೊದಲು ವಾರಗಳ ಹಿಂದೆಯೇ ಈ ಆನೆಗಳಿಗೆ ನೀಡಬೇಕಾದ ವಿಶೇಷ ಆಹಾರದ ವ್ಯವಸ್ಥೆಯನ್ನೇ ಪಾಲಿಕೆ ಮಾಡಿಲ್ಲ. ಹಾಗೆಯೇ ಆನೆಗಳೊಂದಿಗೆ ಬರುವ ಮಾವುತರಿಗೆ ಗೌರವ ಧನವನ್ನೂ ನೀಡಿಲ್ಲ. ಕಳೆದ ವರ್ಷವೂ ವಿಜಯದಶಮಿ ಮುಗಿದ ನಂತರ ಹೊಟ್ಟೆಗೆ ಆಹಾರವಿಲ್ಲದೆ ಮಾವುತರು ಮತ್ತು ಆನೆಗಳು ಬಿಡಾರಕ್ಕೆ ಉಪವಾಸದಿಂದಲೇ ಬರಬೇಕಾಗಿತ್ತು. ಈ ವರ್ಷವೂ ಕೂಡ ಅದೇ ಪುನಾರಾವರ್ತನೆ ಆಗುತ್ತಿರುವುದು ಬಿಡಾರದ ಮಾವುತರಲ್ಲಿ ಅಸಮಾಧಾನ ಮೂಡಿಸಿದೆ. ದಸರಾ ಕಾರ್ಯಕ್ರಮಗಳಿಗಾಗಿ ಲಕ್ಷಾಂತರ ರೂ. ಖರ್ಚು ಮಾಡುವ ಪಾಲಿಕೆ ಈ ರೀತಿ ನಿರ್ಲಕ್ಷ್ಯ ವಹಿಸಿ ಜನರ ಆಕ್ರೋಶಕ್ಕೆ ತುತ್ತಾಗಿದ್ದಾರೆ.

ಶಿವಮೊಗ್ಗ(ಅ.10): ನಾಡಹಬ್ಬ ಮೈಸೂರು ದಸರಾದ ಜಂಬೂಸವಾರಿಗೆ ಕ್ಷಣಗಣನೆ ಶುರುವಾಗಿದೆ. ಮೈಸೂರು ದಸರಾಗೆ ಬಂದಿರುವ ಗಜಪಡೆಗೆ ಭರ್ಜರಿ ರಾಜಾಥಿತ್ಯ ದೊರೆತಿದೆ. ಆದರೆ, ಶಿವಮೊಗ್ಗದ ದಸರಾದಲ್ಲಿ ಆನೆಗಳು ಮತ್ತು ಮಾವುತರನ್ನು ಶಿವಮೊಗ್ಗ ಮಹಾನಗರ ಪಾಲಿಕೆ ನಿರ್ಲಕ್ಷಿಸಿದೆ.

Add Asianetnews Kannada as a Preferred SourcegooglePreferred

ಮಹಾನಗರ ಪಾಲಿಕೆ ಪ್ರತಿ ವರ್ಷದಂತೆ ಸಕ್ರೆಬೈಲು ಆನೆ ಬಿಡಾರದಿಂದ ಮೂರು ಆನೆಗಳನ್ನು ದಸರಾ ಮೆರವಣಿಗೆಯಲ್ಲಿ ಅಂಬಾರಿ ಹೊರಲು ಕರೆ ತರಲಾಗುತ್ತಿತ್ತು. ಹಾಗೆಯೇ ಈ ಬಾರಿಯ ಕೂಡ ಬಿಡಾರದಿಂದ ಮೂರು ಆನೆಗಳನ್ನು ಸಿದ್ಧಗೊಳಿಸಲಾಗಿದೆ. ಆದರೆ ವಿಜಯದಶಮಿಗೂ ಮೊದಲು ವಾರಗಳ ಹಿಂದೆಯೇ ಈ ಆನೆಗಳಿಗೆ ನೀಡಬೇಕಾದ ವಿಶೇಷ ಆಹಾರದ ವ್ಯವಸ್ಥೆಯನ್ನೇ ಪಾಲಿಕೆ ಮಾಡಿಲ್ಲ. ಹಾಗೆಯೇ ಆನೆಗಳೊಂದಿಗೆ ಬರುವ ಮಾವುತರಿಗೆ ಗೌರವ ಧನವನ್ನೂ ನೀಡಿಲ್ಲ.

ಕಳೆದ ವರ್ಷವೂ ವಿಜಯದಶಮಿ ಮುಗಿದ ನಂತರ ಹೊಟ್ಟೆಗೆ ಆಹಾರವಿಲ್ಲದೆ ಮಾವುತರು ಮತ್ತು ಆನೆಗಳು ಬಿಡಾರಕ್ಕೆ ಉಪವಾಸದಿಂದಲೇ ಬರಬೇಕಾಗಿತ್ತು. ಈ ವರ್ಷವೂ ಕೂಡ ಅದೇ ಪುನಾರಾವರ್ತನೆ ಆಗುತ್ತಿರುವುದು ಬಿಡಾರದ ಮಾವುತರಲ್ಲಿ ಅಸಮಾಧಾನ ಮೂಡಿಸಿದೆ. ದಸರಾ ಕಾರ್ಯಕ್ರಮಗಳಿಗಾಗಿ ಲಕ್ಷಾಂತರ ರೂ. ಖರ್ಚು ಮಾಡುವ ಪಾಲಿಕೆ ಈ ರೀತಿ ನಿರ್ಲಕ್ಷ್ಯ ವಹಿಸಿ ಜನರ ಆಕ್ರೋಶಕ್ಕೆ ತುತ್ತಾಗಿದ್ದಾರೆ.