ಅಭ್ಯರ್ಥಿಗೆ ವಿದ್ಯಾರ್ಹತೆ ಇಲ್ಲದಿದ್ದರೂ, ಕೊಟ್ಟ ಮಾಹಿತಿ ಸರಿ ಇರಬೇಕು ಎನ್ನುತ್ತಿದೆ ಕೋರ್ಟ್ ಆದೇಶ

ನವದೆಹಲಿ: ಚುನಾ​ವ​ಣೆಗೆ ಸ್ಪರ್ಧಿ​ಸುವ ಅಭ್ಯ​ರ್ಥಿ​ಗಳು, ತಾವು ಸಲ್ಲಿ​ಸುವ ನಾಮ​ಪ​ತ್ರ​ದಲ್ಲಿ ವಿದ್ಯಾ​ರ್ಹ​ತೆಗೆ ಸಂಬಂಧಿ​ಸಿ​ದಂತೆ ಸತ್ಯಾಂಶ​ವನ್ನು ಉಲ್ಲೇಖಿ​ಸ​ಬೇಕೆಂಬುದು ನಿಯಮ. ಅದ​ರಲ್ಲೇ​ನಾ​ದರೂ ತಪ್ಪು ಕಂಡು ಬಂದರೆ, ಅವರ ಸ್ಥಾನವೇ ರದ್ದಾ​ಗುವ ಸಾಧ್ಯ​ತೆ​ಗ​ಳಿವೆ. ಹೌದು. ಮಣಿ​ಪು​ರದ ಕಾಂಗ್ರೆಸ್‌ ಶಾಸಕ ತಾವು ಸಲ್ಲಿ​ಸಿದ್ದ ನಾಮ​ಪ​ತ್ರ​ದಲ್ಲಿ ವಿದ್ರ್ಯಾ​ಹ​ತೆಗೆ ಸಂಬಂಧಿ​ಸಿ​ದಂತೆ ತಪ್ಪು ಮಾಹಿತಿ ನೀಡಿದ್ದರಿಂದ ಅವರು ಸ್ಥಾನ​ವನ್ನೇ ಕಳೆ​ದು​ಕೊಳ್ಳು​ವಂತಾ​ಗಿದೆ. 

ಮಣಿಪುರದ ಕಾಂಗ್ರೆಸ್‌ ಶಾಸಕ ಮರೆಂಬಾಮ್‌ ಪೃಥ್ವಿರಾಜ್‌ ತಮ್ಮ ನಾಮಪತ್ರದಲ್ಲಿ ವಿದ್ಯಾರ್ಹತೆ ಎಂಬಿಎ ಎಂದು ಉಲ್ಲೇಖಿ​ಸಿ​ದ್ದರು. 2004ರಲ್ಲಿ ಮೈಸೂರು ವಿವಿಯಿಂದ ಪದವಿ ಪಡೆದಿದ್ದೆ ಎಂದು ಹೇಳಿಕೊಂಡಿದ್ದರು. ಆದರೆ, ಅದು ಸುಳ್ಳು ಎಂದು ಹೇಳ​ಲಾ​ಯಿತು.ತಪ್ಪು ಮಾಹಿತಿ ನೀಡಿ​ದ್ದ​ಕ್ಕಾಗಿ ಅವರ ಸ್ಥಾನಕ್ಕೆ ಕುತ್ತು ಎದು​ರಾ​ಗಿತ್ತು. ಹೀಗಾಗಿ ಕೋರ್ಟ್‌ ಮೊರೆ ಹೋಗಿದ್ದ ಶಾಸಕ ‘‘ನಾಮಪತ್ರ ಸಲ್ಲಿಕೆ ವೇಳೆ ತಮ್ಮ ಪರ ವಕೀಲ ಮತ್ತು ಏಜೆಂಟ್‌ನಿಂದಾಗಿ ಮಾಹಿತಿಯಲ್ಲಿ ತಪ್ಪಾಗಿದೆ ಹೀಗಾಗಿ ತಮ್ಮ ಆಯ್ಕೆ ರದ್ದು ಮಾಡಬಾರದು,'​' ಎಂದು ಕೋರಿ​ದ್ದರು. 

ಇತ್ತೀ​ಚೆಗೆ ಕೇಳಿ​ಬಂದ ಎರಡು ನಕಲಿ ಅಂಕ​ಪಟ್ಟಿ ವಿವಾದ

1) ಆಪ್‌ ಶಾಸಕ ಸುರೇಂದರ್‌: ದೆಹಲಿ ಕಂಟೋನ್ಮೆಂಟ್‌ ಕ್ಷೇತ್ರದ ಆಪ್‌ ಶಾಸಕ ಸುರೇಂದರ್‌ ಸಿಂಗ್‌ ವಿರುದ್ಧ ಕೂಡ ನಕಲಿ ಪದವಿ ಪಡೆದ ಆರೋಪ ಕೇಳಿ ಬಂದಿದೆ. ಹರ್ಯಾಣದಲ್ಲಿ ಸರ್ಕಾರಿ ಉದ್ಯೋಗ ಪಡೆದುಕೊಳ್ಳಲು 2012ರಲ್ಲಿ ನಕಲಿ ಅಂಕಪಟ್ಟಿನೀಡಿದ್ದಾರೆ ಎಂದು ಬಿಜೆಪಿ ನಾಯಕ ಕರಣ್‌ ಸಿಂಗ್‌ ತನ್ವರ್‌ ಎಂಬುವರು ಜಜ್ಝರ್‌ ಠಾಣೆಯಲ್ಲಿ ಆ.2ರಂದು ದೂರು ನೀಡಿದ್ದರು.

2) ಕೇಂದ್ರ ಸಚಿವೆ ಸ್ಮೃತಿ: ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿ ನಕಲಿ ಪದವಿ ಪ್ರಮಾಣ ಪತ್ರ ನೀಡಿದ ಆರೋಪ ಎದುರಿಸುತ್ತಿದ್ದಾರೆ. 2004 ಮತ್ತು 2014ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ವೇಳೆ ವಿದ್ಯಾರ್ಹತೆಗೆ ಸಂಬಂಧಿಸಿದಂತೆ ನಕಲಿ ಪ್ರಮಾಣ ಪತ್ರವನ್ನು ನಾಮಪತ್ರ ಜತೆ ನೀಡಿದ್ದರೆಂದು ಆರೋಪಿಸಲಾಗಿತ್ತು. ಪ್ರಕರಣದ ವಿಚಾರಣೆ ಇನ್ನೂ ಮುಗಿದಿಲ್ಲ.

(ಕೃಪೆ: ಕನ್ನಡಪ್ರಭ)