ಮಡಿಕೇರಿ(ಸೆ.17): ಮಡಿಕೇರಿಯಲ್ಲಿ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಿಐಡಿ ಮಡಿಕೇರಿ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದೆ.
ಬಿ ರಿಪೋರ್ಟ್ನಲ್ಲಿ ಮಾಜಿ ಸಚಿವ ಕೆ.ಜೆ. ಜಾರ್ಜ್ ಸೇರಿ ಮೂವರಿಗೆ ಸಿಐಡಿ ಕ್ಲೀನ್ಚಿಟ್ನೀಡಿದೆ. ಮಾಜಿ ಸಚಿವ ಜಾರ್ಜ್, ಎಡಿಜಿಪಿ ಎ.ಎಂ. ಪ್ರಸಾದ್, ಡಿಐಜಿ ಪ್ರಣಬ್ ಮೊಹಂತಿಗೆ ಸಿಐಡಿ ಕ್ಲೀನ್ ಚಿಟ್ನೀಡಿದೆ.
ಸೆಪ್ಟೆಂಬರ್ 19ರ ಒಳಗಾಗಿ ಗಣಪತಿ ಪ್ರಕರಣದ ವರದಿ ಸಲ್ಲಿಸಲು ಸಿಐಡಿಗೆ ಕೋರ್ಟ್ ಸೂಚಿಸಿತ್ತು. ಈ ಹಿನ್ನಲೆಯಲ್ಲಿ ಜಾರ್ಜ್ ಸೇರಿ ಇತರೆ ಇಬ್ಬರು ಹಿರಿಯ ಅಧಿಕಾರಿಗಳ ವಿರುದ್ಧದ ಆರೋಪಕ್ಕೆ ಯಾವುದೇ ಸಾಕ್ಷಿಯಿಲ್ಲ ಹಾಗೂ ಪ್ರಕರಣ ಸಂಬಂಧ ಸೂಕ್ತ ಸಾಕ್ಷ್ಯಾಧಾರ ಕೊರತೆ ಇದೆ ಎಂಬುವುದಾಗಿ ವರದಿಯಲ್ಲಿ ನಮೂದಿಸಲಾಗಿದೆ ಎಂದು ಸುವರ್ಣ ನ್ಯೂಸ್ ಗೆ ಸಿಐಡಿ ಮೂಲಗಳ ಮಾಹಿತಿ ನೀಡಿವೆ.
