ದಂಪತಿಯ ಬರ್ಬರ ಹತ್ಯೆ

ಬೆಂಗಳೂರು(ನ.28): ಸಿಲಿಕಾನ್ ಸಿಟಿಯಲ್ಲಿ ಮತ್ತೆ ನೆತ್ತರು ಹರಿದಿದೆ. ದಂಪತಿಗಳನ್ನು ಚಾಕುವಿನಿಂದ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಾರತ್​ಹಳ್ಳಿ ಬ್ರಿಡ್ಜ್​ ಬಳಿಯ ಅಶ್ವಥ್​ ನಗರದಲ್ಲಿ ನಡೆದಿದೆ. ಬಿಇಎಲ್​ ಮಾಜಿ ನೌಕರ ಗೋವಿಂದನ್, ಅವರ ಪತ್ನಿ ಕೊಲೆಯಾಗಿರುವವರು. ಸ್ಥಳಕ್ಕೆ ವೈಟ್ ಫೀಲ್ಡ್ ಡಿಸಿಪಿ ಅಬ್ದುಲ್ ಅಹ್ಮದ್​ ಭೇಟಿ ನೀಡಿದ್ದು, ಎಚ್ಎಎಲ್ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.