ಸ್ವಾತಂತ್ರ ಹೋರಾಟಗಾರ ದೊರೆಸ್ವಾಮಿ ಆಸ್ಪತ್ರೆಗೆ ದಾಖಲು
ಸ್ವಾತಂತ್ರ ಹೋರಾಟಗಾರ ಎಚ್, ಎಸ್ ದೊರೆಸ್ವಾಮಿ ಉಸಿರಾಟದ ತೊಂದರೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬೆಂಗಳೂರು (ಮಾ. 11): ಸ್ವಾತಂತ್ರ ಹೋರಾಟಗಾರ ಎಚ್, ಎಸ್ ದೊರೆಸ್ವಾಮಿ ಉಸಿರಾಟದ ತೊಂದರೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಉಸಿರಾಟದ ತೊಂದರೆಯಿಂದಾಗಿ ದೊರೆಸ್ವಾಮಿ ನಿನ್ನೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಾಳೆ ಸಂಜೆ ಡಿಸ್ಚಾರ್ಜ್ ಆಗಲಿದ್ದಾರೆ.
ಈ ಹಿಂದೆ ಆರೋಗ್ಯ ದಲ್ಲಿ ಏರು-ಪೇರಾದ ಹಿನ್ನೆಲೆಯಲ್ಲಿ ಜಯದೇವ ಅಸ್ಪತ್ರೆಗೆ ದಾಖಲಾಗಿದ್ದರು. ವಾರಗಳ ಕಾಲ ಚಿಕಿತ್ಸೆ ಪಡೆದು ಮಾ. 6 ರಂದು ಡಿಸ್ಚಾರ್ಜ್ ಅಗಿದ್ದರು. ನಿನ್ನೆ ಮತ್ತೆ ಉಸಿರಾಟ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದೊರೆಸ್ವಾಮಿ ದಾಖಲು ಅಗಿದ್ದಾರೆ ಎಂದು ಸುವರ್ಣ ನ್ಯೂಸ್ ಗೆ ದೊರೆಸ್ವಾಮಿ ಅವರ ಮನೆಯವರು ಖಚಿತಪಡಿಸಿದ್ದಾರೆ. ಯಾವ ಅಸ್ಪತ್ರೆಗೆ ಎಂಬುದನ್ನು ತಿಳಿಸಲು ನಿರಾಕರಿಸಿದ್ದಾರೆ.