ಐಎಎಂ ಅಧ್ಯಕ್ಷರಾದ ಡಾ. ರವೀಂದ್ರ ಪತ್ರಿಕಾಗೋಷ್ಠಿ ನಡೆಸಿ  ಕೇಂದ್ರ ಸರ್ಕಾರ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ (ಎಂಸಿಐ )ಮುಚ್ಚಲು ಹೊರಟಿರುವುದು ಸರಿಯಲ್ಲ, ಎಂಸಿಐ ನಲ್ಲಿ ಭ್ರಷ್ಟಾಚಾರ ನಡದಿದೆ ಎಂದು ಸಂಸ್ಥೆ ಯನ್ನೇ ಮುಚ್ಚಲು ಹೊರಟಿರುವುದು ಎಷ್ಟು ಎಂದು ಪ್ರಶ್ನೆ ಮಾಡಿದ್ದಾರೆ

ಬೆಂಗಳೂರು (ಡಿ.30): ಐಎಎಂ ಅಧ್ಯಕ್ಷರಾದ ಡಾ. ರವೀಂದ್ರ ಪತ್ರಿಕಾಗೋಷ್ಠಿ ನಡೆಸಿ ಕೇಂದ್ರ ಸರ್ಕಾರ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ (ಎಂಸಿಐ )ಮುಚ್ಚಲು ಹೊರಟಿರುವುದು ಸರಿಯಲ್ಲ, ಎಂಸಿಐ ನಲ್ಲಿ ಭ್ರಷ್ಟಾಚಾರ ನಡದಿದೆ ಎಂದು ಸಂಸ್ಥೆ ಯನ್ನೇ ಮುಚ್ಚಲು ಹೊರಟಿರುವುದು ಎಷ್ಟು ಎಂದು ಪ್ರಶ್ನೆ ಮಾಡಿದ್ದಾರೆ.

ಅಲ್ಲದೇ ಎಂಸಿಐ ಪರ್ಯಾಯವಾಗಿ ನ್ಯಾಷನಲ್ ಮೆಡಿಕಲ್ ಕೌನ್ಸಿಲ್ (ಎನ್ ಎಂಸಿ )ತೆರೆಯುವುದಕ್ಕೆ ಭಾರತೀಯ ವೈದ್ಯಕೀಯ ಪರಿಷತ್ ವಿರೋಧಿಸುತ್ತದೆ. ಸಂಸತ್ ನಲ್ಲಿ ನಿನ್ನೆ ಎನ್ ಎಂಸಿ ಬಿಲ್ ಮಂಡನೆ ಯಾಗಿದೆ.

ಈ ಬಿಲ್ ಜಾರಿ ಮಾಡದಂತೆ ಐಎಂಎ ನಾಳೆ ದೆಹಲಿಯಲ್ಲಿ ಮಹತ್ವದ ಸಭೆ ನಡೆಸಲು ತೀರ್ಮಾನಿಸಲಾಗಿದ್ದು, ಸಭೆಯ ನಂತರ ಮುಂದೆ ಏನು ಮಾಡಬೇಕು ಎಂಬುದನ್ನು ನಿರ್ಧಾರಿಸುತ್ತೇವೆ ಎಂದು ಹೇಳಿದ್ದಾರೆ.

 ಒಂದು ವೇಳೆ ಕೇಂದ್ರ ಸರ್ಕಾರ ಈ ಬಿಲ್ ಜಾರಿಗೆ ತಂದಲ್ಲಿ ಇಡೀ ದೇಶದಲ್ಲಿ ವೈದ್ಯರು ಪ್ರತಿಭಟಿಸಲು ನಿರ್ಧಾರ ಮಾಡಿದ್ದಾಗಿ ಹೇಳಿದ್ದಾರೆ. ಈ ಬಿಲ್ ವಿರೋಧಿಸಿ ಜ. 1 ಸಂಜೆ ರಂದು ವೈದ್ಯಕೀಯ ಕಾಲೇಜ್ ಮೌನ ಪ್ರತಿಭಟನೆ ನಡೆಸಲಿದ್ದಾರೆ.

ಇದಲ್ಲದೆ ಎಲ್ಲ ಎಂಪಿ ಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸುತ್ತೇವೆ. ಎಂಸಿಐಯಲ್ಲಿ ಕಾನೂನುಗಳು ತುಂಬಾ ಕಠಿಣ ವಾಗಿದ್ದು, ಯಾವುದೇ ಕಾರಣಕ್ಕೂ ಮುಚ್ಚಬಾರದು. ಭ್ರಷ್ಟಾಚಾರ ನಡೆದಿದ್ದರೆ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿ ಎಂದು ಹೇಳಿದ್ದಾರೆ.