ಮಗನ ಸಾವಿನ ಖಿನ್ನತೆಯಿಂದ ವೈದ್ಯ ದಂಪತಿ ನೇಣಿಗೆ ಶರಣು
ಮಗನ ಸಾವಿನಿಂದ ಖಿನ್ನತೆಗೆ ಒಳಗಾಗಿದ್ದ ವೈದ್ಯ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸರಸ್ವತಿಪುಂ ನಿವಾಸಿಗಳಾದ ಡಾ.ಸತೀಶ್. ಡಾ.ವೀಣಾ ದಂಪತಿ ಆತ್ಮಹತ್ಯೆ ಮಾಡಿಕೊಂಡವರು.
ಮೈಸೂರು (ಮಾ. 28): ಮಗನ ಸಾವಿನಿಂದ ಖಿನ್ನತೆಗೆ ಒಳಗಾಗಿದ್ದ ವೈದ್ಯ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸರಸ್ವತಿಪುಂ ನಿವಾಸಿಗಳಾದ ಡಾ.ಸತೀಶ್. ಡಾ.ವೀಣಾ ದಂಪತಿ ಆತ್ಮಹತ್ಯೆ ಮಾಡಿಕೊಂಡವರು.
ಕುಕ್ಕರಹಳ್ಳಿ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಗ ಮೃತಪಟ್ಟಿದ್ದ. ಈ ಘಟನೆ ಬಳಿಕ ದಂಪತಿ ಖಿನ್ನತೆಗೆ ಒಳಗಾಗಿದ್ದರು. ಏಕೈಕ ಮಗನನ್ನು ಕಳೆದುಕೊಂಡು ನೋವಿನಲ್ಲಿದ್ದರು. ನೋವಿನಿಂದ ಹೊರ ಬರಲು ಸಮಾಜಸೇವೆ ಕಾರ್ಯಗಳಲ್ಲಿ ತೊಡಗಿದ್ದರು. ಇಂದು ಮದ್ತಾಹ್ನ 1:30 ಸುಮಾರಿಗೆ ಸರಸ್ವತಿ ಪುರಂನ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಾರೆ.