ಸಂಪುಟ ಪುನಾರಚನೆ ನಂತರ ಸಿಎಂಗೆ ಜಿಲ್ಲಾ ಉಸ್ತುವಾರಿ ಸಚಿವರ ನೇಮಕದ ತಲೆ ನೋವು ಶುರು ದಕ್ಷಿಣ ಜಿಲ್ಲೆಗಳ ನಾಯಕರಲ್ಲಿಯೇ ಹೆಚ್ಚು ಪೈಪೋಟಿ

ಬೆಂಗಳೂರು[ಜೂ.22]: ಸಂಪುಟ ರಚನೆಯ ತಲೆ ನೋವಿನ ನಂತರ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮತ್ತೊಂದು ಸವಾಲು ಶುರುವಾಗಿದೆ. 
30 ಜಿಲ್ಲೆಗಳ ಉಸ್ತುವಾರಿ ಸಚಿವರನ್ನು ನೇಮಿಸಲು ಮೈತ್ರಿ ಪಕ್ಷಕ್ಕೆ ತಿಕ್ಕಟ ಆರಂಭವಾಗಿದೆ. ಈಗಾಗಲೇ ಸಂಭವನೀಯ ಪಟ್ಟಿ ಮುಖ್ಯಮಂತ್ರಿ ಬಳಿಯಿದ್ದು ಈ ಬಾರಿಯೂ ದಕ್ಷಿಣ ಕರ್ನಾಟಕ ಜಿಲ್ಲೆಗಳ ನಾಯಕರಲ್ಲಿಯೇ ಭಿನ್ನಾಭಿಪ್ರಾಯ ಉಂಟಾಗಿದೆ. ಸಹಮತದ ಸೂತ್ರಕ್ಕೆ ಎರಡೂ ಪಕ್ಷಗಳ ನಾಯಕರು ಒಪ್ಪುತ್ತಿಲ್ಲ ಎನ್ನಲಾಗಿದೆ.


ಸಂಭವನೀಯ ಉಸ್ತುವಾರಿ ಸಚಿವರ ಪಟ್ಟಿ ಇಂತಿದೆ

ಮೈಸೂರು ಜಿ.ಟಿ.ದೇವೆಗೌಡ
ಮಂಡ್ಯ  ಸಿ.ಎಸ್.ಪುಟ್ಟರಾಜು
ಹಾಸನ ಹೆಚ್.ಡಿ.ರೇವಣ್ಣ
ತುಮಕೂರುಶ್ರೀನಿವಾಸ್ ( ಗುಬ್ಬಿ)
ಚಾಮರಾಜನಗರಪುಟ್ಟರಂಗಶೆಟ್ಟಿ
ಕೋಲಾರ ಕೃಷ್ಣ ಬೈರೆಗೌಡ
ಚಿಕ್ಕಬಳ್ಳಾಪುರ ಎನ್ ಹೆಚ್ ಶಿವಶಂಕರರೆಡ್ಡಿ
ಕೊಡಗು  ಕೆ.ಜೆ.ಜಾರ್ಜ್
ದಕ್ಷಿಣಕನ್ನಡಯು.ಟಿ.ಖಾದರ್
ಉಡುಪಿ ಡಾ.ಜಯಮಾಲಾ
ಶಿವಮೊಗ್ಗ ಡಿ.ಸಿ.ತಮ್ಮಣ್ಣ
ಚಿಕ್ಕಮಗಳೂರು ಸಾ.ರಾ.ಮಹೇಶ್
ರಾಮನಗರ ಡಿ.ಕೆ.ಶಿವಕುಮಾರ್
ಬಳ್ಳಾರಿ ಡಿ.ಕೆ.ಶಿವಕುಮಾರ್
ದಾವಣಗೆರೆ ಎನ್ ಮಹೇಶ್
ಬೆಂಗಳೂರು ಗ್ರಾಮಾಂತರಜಮೀರ್ ಅಹ್ಮದ್ ಖಾನ್
ಬೆಂಗಳೂರು ನಗರ ಡಾ.ಜಿ.ಪರಮೇಶ್ವರ
ಚಿತ್ರದುರ್ಗ ವೆಂಕಟರಮಣಪ್ಪ
ಹಾವೇರಿ ಆರ್ ಶಂಕರ್
ಧಾರವಾಡ ರಮೇಶ್ ಜಾರಕಿಹೊಳಿ
ಬೆಳಗಾವಿ ರಮೇಶ್ ಜಾರಕಿಹೊಳಿ
ಉತ್ತರಕನ್ನಡ ಆರ್ ವಿ.ದೇಶಪಾಂಡೆ
ಗದಗ ಕೃಷ್ಣ ಬೈರೆಗೌಡ 
ಕೊಪ್ಪಳ ಬಂಡೆಪ್ಪ ಖಾಶಂಪೂರ
ಕಲಬುರ್ಗಿ ಪ್ರಿಯಾಂಕ ಖರ್ಗೆ
ಯಾದಗಿರಿ ಪ್ರಿಯಾಂಕ ಖರ್ಗೆ
ರಾಯಚೂರು ವೆಂಕಟರಾವ್ ನಾಡಗೌಡ
ಬಾಗಲಕೋಟ ಎಂ.ಸಿ.ಮನಗೂಳಿ
ವಿಜಯಪುರ ಶಿವಾನಂದ ಪಾಟೀಲ್
ಬೀದರ ರಾಜಶೇಖರ್ ಪಾಟೀಲ್ ಹುಮ್ನಾಬಾದ್