ಬಳ್ಳಾರಿ(ಸೆ.10): ಕಾಲೇಜು ಕೊಠಡಿಗಳೆಂದರೆ ಶುದ್ಧವಾಗಿ, ಕಲಿಯಲು ಒಳ್ಳೆ ವಾತಾವಣವಿರುತ್ತದೆ. ಆದರೆ ಬಳ್ಳಾರಿಯ ನಾರಾಯಣ ಪಿಯು ಕಾಲೇಜಿನ ಕೊಠಡಿಗಳನ್ನು ನೋಡಿದರೆ ಇದಕ್ಕೆ ತದ್ವಿರುದ್ಧ. ವಿದ್ಯಾರ್ಜನೆ ಮಾಡುವ ಕೊಠಡಿಯ ಗೋಡೆಗಳು ಅಶ್ಲೀಲ ಪದಗಳಿಂದ ರಾರಾಜಿಸುತ್ತಿವೆ.

Add Asianetnews Kannada as a Preferred SourcegooglePreferred

ನಿನ್ನೆ ನಡೆದ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಕಾಲೇಜಿನ ತರಗತಿಯನ್ನ ಬಂದ್ ಮಾಡಿಸಲು ಕನ್ನಡಪರ ಹೋರಾಟಗಾರರು ಕಾಲೇಜಿನ ಕೊಠಡಿಗಳಿಗೆ ಹೋಗಿದ್ದಾರೆ. ಈ ವೇಳೆ ಕೊಠಡಿಯ ಗೋಡೆಗಳ ಮೇಲೆ ದೊಡ್ಡ ದೊಡ್ಡ ಅಕ್ಷರಗಳಲ್ಲಿ ಅಶ್ಲೀಲ ಪದಗಳು ಬರೆದಿರುವುದು ಕಂಡುಬಂದಿದೆ. ಕೂಡಲೇ ಕನ್ನಡಪರ ಹೋರಾಟಗಾರರು ಕಾಲೇಜು ಅಡಳಿತ ಮಂಡಳಿ ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡರು.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಗಾಂಧಿನಗರ ಪೊಲೀಸರು ಆಗಮಿಸಿ ಪರಿಶೀಲನೆಯನ್ನು ನಡೆಸಿದ್ದಾರೆ. ಈ ಬಗ್ಗೆ ಆಡಳಿತ ಮಂಡಳಿ 'ನಿನ್ನೆಯಷ್ಟೇ ಈ ವಿಷಯ ಗಮನಕ್ಕೆ ಬಂದಿದೆ, ಅಶ್ಲೀಲ ಗೋಡೆ ಬರೆಹಗಳನ್ನು ಬರೆದ ವಿದ್ಯಾರ್ಥಿಗಳ ವಿರುದ್ಧ ಕ್ರಮಕೈಗೊಳ್ಳುತ್ತೇವೆ' ಎಂದು ಅಧಿಕಾರಿಗಳು ಲಿಖಿತ ಭರವಸೆ ನೀಡಿದ್ದಾರೆ.