ವಿಧಾನಸಭೆಗೆ ಸ್ಪರ್ಧಿಸಿದ್ಧ ಟಿ.ಎನ್. ಸೀತಾರಾಂ ಎಷ್ಟು ಮತ ಪಡೆದಿದ್ದರು ಗೊತ್ತೆ ?
ಇದೇ ಕಾರಣಕ್ಕಾಗಿ ಅವರು 1999ರ ವಿಧಾನಸಭೆ ಚುನಾವಣೆಗೆ ಗೌರಿಬಿದನೂರು ಕ್ಷೇತ್ರದಿಂದ ಜೆಡಿಯು ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು.
ಹೆಸರಾಂತ ಚಲನಚಿತ್ರ- ಧಾರಾವಾಹಿ ನಿರ್ದೇಶಕ ಟಿ.ಎನ್. ಸೀತಾರಾಂ ಅವರು ವಿಧಾನಸಭೆ ಪ್ರವೇಶಿಸಿ, ಜನಸೇವೆ ಮಾಡುವ ಬಯಕೆ ಹೊಂದಿದ್ದರು. ಇದೇ ಕಾರಣಕ್ಕಾಗಿ ಅವರು 1999ರ ವಿಧಾನಸಭೆ ಚುನಾವಣೆಗೆ ಗೌರಿಬಿದನೂರು ಕ್ಷೇತ್ರದಿಂದ ಜೆಡಿಯು ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು.
ಆದರೆ ಅವರಿಗೆ ಅದೃಷ್ಟ ಕೈಹಿಡಿಯಲಿಲ್ಲ. ನಾಲ್ಕನೇ ಸ್ಥಾನಕ್ಕೆ ಅವರು ಕುಸಿದರು. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ, ಹಾಲಿ ವಿಧಾನಸಭೆ ಉಪಸ್ಪೀಕರ್ ಎನ್.ಎಚ್. ಶಿವಶಂಕರರೆಡ್ಡಿ ಅವರು ಆ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ್ದರು. ಕಾಂಗ್ರೆಸ್ ಹಾಗೂ ಜೆಡಿಎಸ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದವು.