Asianet Suvarna News Asianet Suvarna News

ಸಿದ್ಧಗಂಗಾ ಶ್ರೀಗಳ ಹೆಸರಲ್ಲಿ ವಿಶೇಷ ಪೂಜೆ : ಚೆನ್ನೈಗೆ ಪ್ರಸಾದ ರವಾನೆ

ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು ಶೀಘ್ರ ಗುಣಮುಖರಾಗಲಿ ಎಂದು ಭಕ್ತರು ವಿಶೇಷ ಪೂಜೆ ಸಲ್ಲಿಸಿ ಚೆನ್ನೈಗೆ ಪ್ರಸಾದ ರವಾನೆ ಮಾಡಿದ್ದಾರೆ. 

Devotees Pray For Speedy Recovery Of Siddaganga Sri Shivakumara Swamiji
Author
Bengaluru, First Published Dec 10, 2018, 8:54 AM IST

ಕುಣಿಗಲ್ : ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಗಳು ಶೀಘ್ರ ಗುಣಮುಖರಾಗಲಿ ಎಂದು ಆಶಿಸಿ ನೂರಾರು ಭಕ್ತರು  ಕಗ್ಗೆರೆ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿದರು. 

ಬಳಿಕ ಸಿದ್ದಲಿಂಗೇಶ್ವರ ಶತಮಾನೋತ್ಸವ ಸಮಿತಿ ಸದಸ್ಯರು ಅಭಿಷೇಕದ ನಂತರ ಚೆನ್ನೈಗೆ ಪ್ರಸಾದ ಕೊಂಡೊಯ್ದರು. ಸಿದ್ದಲಿಂಗೇಶ್ವರನ ಮುಂದೆ ಡಾ. ಶಿವಕುಮಾರಸ್ವಾ ಸ್ವಾಮೀಜಿ ಅವರ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಿ ಶ್ರೀಗಳು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸಿದರು. 

ಐವತ್ತೈದು ಲೀಟರ್ ಹಾಲು, ಎಳನೀರು ಕಬ್ಬು, ದ್ರಾಕ್ಷಿ ಸೇರಿದಂತೆ ಹಲವಾರು ದ್ರವ್ಯ ಉಪಯೋಗಿಸಿ ರುದ್ರಾಭಿಷೇಕ ನೆರವೇರಿಸಲಾಯಿತು. 

Follow Us:
Download App:
  • android
  • ios