ಬೆಂಗಳೂರು (ಸೆ.17): ಆರ್.ಆರ್. ನಗರದಲ್ಲಿ ರಾಜಕಾಲುವೆ ಒತ್ತುವರಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಎಸ್.ಎಸ್ ಆಸ್ಪತ್ರೆ ಮಾಲಕ ಹಾಗೂ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ, ಕಾನೂನು ಪ್ರಕಾರವೇ ನಾವು ಭೂಮಿ ಗುತ್ತಿಗೆ ಪಡೆದು ಆಸ್ಪತ್ರೆ ಕಟ್ಟಲಾಗಿದೆ ಎಂದು ಹೇಳಿದ್ದಾರೆ.
ಬಿಡಿಎ ಕೊಟ್ಟಿರುವ ಸೈಟ್ನಲ್ಲಿ ಆಸ್ಪತ್ರೆ ಕಟ್ಟಲಾಗಿದೆ ಎಂದಿರುವ ಶಾಮನೂರು, ಅಕ್ರಮ ನಡೆದಿದ್ದರೆ ಎಸ್.ಎಸ್. ಆಸ್ಪತ್ರೆ ಒಡೆದು ಹಾಕಲಿ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರವೇ ನಮಗೆ 2 ಎಕರೆ ಜಮೀನು ನೀಡಿತ್ತು; ಕಾನೂನು ಪ್ರಕಾರವೇ 30 ವರ್ಷಗಳ ಅವಧಿಗೆ ಸರ್ಕಾರದಿಂದ ಭೂಮಿ ಗುತ್ತಿಗೆ ಪಡೆದಿದ್ದೇವೆ. ಈಗಾಗಲೇ 19 ವರ್ಷ ಆಗಿದ್ದು ಇನ್ನೂ 11 ವರ್ಷ ಇದೆ ಎಂದು ಶಾಮನೂರು ಹೇಳಿದ್ದಾರೆ.
ಎಸ್.ಎಸ್.ಆಸ್ಪತ್ರೆಯಿಂದ ರಾಜಕಾಲುವೆ ಒತ್ತುವರಿಯಾಗಿದೆ ಎಂಬ ಆರೋಪ ಸರಿಯಲ್ಲ, ನಾವು ಯಾವುದೇ ರೀತಿಯ ಅಕ್ರಮ ಮಾಡಿಲ್ಲ, ಈ ಬಗ್ಗೆ ನಮ್ಮ ಇಂಜಿನಿಯರ್ಗಳ ಜೊತೆ ಮಾತನಾಡಿದ್ದೇನೆ ಎಂದು ಹೇಳಿರುವ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಇದು ರಾಜಕೀಯ ಲಾಭಕ್ಕಾಗಿ ಮಾಡುತ್ತಿರುವ ಗಿಮಿಕ್ ಎಂದು ಹೇಳಿದ್ದಾರೆ.
ಈ ಬಗ್ಗೆ ಕಾನೂನು ಹೋರಾಟ ನಡೆಸುತ್ತೇವೆ ಎಂದು ಎಸ್.ಎಸ್.ಮಲ್ಲಿಕಾರ್ಜುನ ಹೇಳಿದ್ದಾರೆ.
