Asianet Suvarna News Asianet Suvarna News

ಅಯೋಧ್ಯೆಯಲ್ಲಿ ಮದ್ಯ, ಮಾಂಸ ಮಾರಾಟ ನಿಷೇಧಕ್ಕೆ ಯೋಗಿ ಸಜ್ಜು

ಕೆಲವು ಸ್ಥಳೀಯ ಸಾಧು-ಸಂತರು ಹಾಗೂ ಯತಿಗಳು ಮದ್ಯ ಮತ್ತು ಮಾಂಸ ಮಾರಾಟ ನಿಷೇಧಕ್ಕೆ ಮನವಿ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಆದಿತ್ಯನಾಥ ಸಂಪುಟದ ಸಚಿವ ಶ್ರೀಕಾಂತ್‌ ಶರ್ಮಾ, ‘ಈ ಮನವಿಯ ಬಗ್ಗೆ ನಮಗೆ ಗೊತ್ತಿದೆ. ಕಾನೂನಿನ ಚೌಕಟ್ಟಿನಲ್ಲಿ ಮದ್ಯ ಮತ್ತು ಮಾಂಸ ಮಾರಾಟದ ನಿಷೇಧ ಮಾಡಲಾಗುತ್ತದೆ’ ಎಂದರು.
 

Days after renaming Faizabad as Ayodhya Yogi Adityanath govt mulls ban on sale of meat alcohol
Author
Ayodhya, First Published Nov 13, 2018, 1:27 PM IST

ಲಖನೌ[ನ.13]: ಫೈಜಾಬಾದ್‌ ಜಿಲ್ಲೆಗೆ ಅಯೋಧ್ಯೆ ಎಂದು ಮರುನಾಮಕರಣ ಮಾಡುವ ನಿರ್ಧಾರ ಕೈಗೊಂಡ ನಂತರ ಫೈಜಾಬಾದ್‌ ಜಿಲ್ಲಾದ್ಯಂತ ಮದ್ಯ ಮತ್ತು ಮಾಂಸ ಮಾರಾಟ ನಿಷೇಧ ಮಾಡಲು ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ಚಿಂತನೆ ನಡೆಸುತ್ತಿದೆ.

ಫೈಜಾಬಾದ್‌ ಇನ್ಮುಂದೆ ಅಯೋಧ್ಯೆ: ಯೋಗಿ ಆದಿತ್ಯನಾಥ್!

ಕೆಲವು ಸ್ಥಳೀಯ ಸಾಧು-ಸಂತರು ಹಾಗೂ ಯತಿಗಳು ಮದ್ಯ ಮತ್ತು ಮಾಂಸ ಮಾರಾಟ ನಿಷೇಧಕ್ಕೆ ಮನವಿ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಆದಿತ್ಯನಾಥ ಸಂಪುಟದ ಸಚಿವ ಶ್ರೀಕಾಂತ್‌ ಶರ್ಮಾ, ‘ಈ ಮನವಿಯ ಬಗ್ಗೆ ನಮಗೆ ಗೊತ್ತಿದೆ. ಕಾನೂನಿನ ಚೌಕಟ್ಟಿನಲ್ಲಿ ಮದ್ಯ ಮತ್ತು ಮಾಂಸ ಮಾರಾಟದ ನಿಷೇಧ ಮಾಡಲಾಗುತ್ತದೆ’ ಎಂದರು.

ಊರಿನ ಹೆಸರೇಕೆ ಬದಲಾಗುತ್ತದೆ?: ಇಲ್ಲಿದೆ ಕುತೂಹಲಕಾರಿ ವಿಚಾರ

ಕೋಶಿ ಪರಿಕ್ರಮ ಯಾತ್ರೆಯ ಸ್ಥಳಗಳು ಎಂದು ಅಯೋಧ್ಯೆ ಹಾಗೂ ಮಥುರೆಗಳನ್ನು ಹೆಸರಿಸಲಾಗುತ್ತದೆ. ಇದರಿಂದ ತನ್ನಿಂತಾನೇ ಇಲ್ಲಿ ಮದ್ಯ-ಮಾಂಸ ನಿಷೇಧ ಸಾಧ್ಯವಾಗಲಿದೆ. ಕೋಶಿ ಪರಿಕ್ರಮ ಯಾತ್ರಾ ಸ್ಥಳಗಳಲ್ಲಿ ಇವುಗಳ ನಿಷೇಧ ಈಗಾಗಲೇ ಜಾರಿಯಲ್ಲಿದೆ ಎಂದು ಶರ್ಮಾ ಹೇಳಿದರು.

ಅಯೋಧ್ಯೆ: ಏಕತಾ ಪ್ರತಿಮೆಗಿಂತಲೂ ಎತ್ತರದ ರಾಮನ ಪ್ರತಿಮೆ?

‘ಅಯೋಧ್ಯೆ ಪವಿತ್ರ ಸ್ಥಳವಾಗಿದ್ದು, ಇಲ್ಲಿ ಮದ್ಯ ಹಾಗೂ ಮಾಂಸ ಮಾರಾಟ ಆಗಕೂಡದು. ನಿಷೇಧದಿಂದ ಆರೋಗ್ಯಕರ ಜೀವನಶೈಲಿ ನಿರ್ಮಾಣವಾಗಲಿದೆ’ ಎಂದು ಆಚಾರ್ಯ ಸತ್ಯೇಂದ್ರ ದಾಸ್‌ ಎಂಬ ಸಂತರು ಹೇಳಿದ್ದಾರೆ.

Follow Us:
Download App:
  • android
  • ios