ನವರಾತ್ರಿ ಎಂದಾಕ್ಷಣ ನೆನಪಿಗೆ ಬರೋದು ಮನೆ ಮನೆಗಳಲ್ಲಿ ಗೊಂಬೆ ಕೂರಿಸುವುದು. ಆದರೆ ಇತ್ತೀಚಿನ ದಿನಗಳಲ್ಲಿ ಆ ಸಂಪ್ರದಾಯ ತನ್ನ ಕಳೆ ಕಳೆದುಕೊಳ್ಳುತ್ತಿದೆ. ಆದರೆ ಜನರಿಗೆ ಅರಿವು ಮೂಡಿಸಿ, ಹಬ್ಬದ ಪ್ರಾಮುಖ್ಯತೆಯ ಬಗ್ಗೆ ತಿಳಿಸುವ ದೃಷ್ಟಿಯಿಂದ ನಗರದ ಗರುಡ ಮಾಲ್ ನಲ್ಲಿ ಸಂಪ್ರದಾಯಿಕ ಗೊಂಬೆಗಳನ್ನು ಕೂರಿಸಲಾಗಿದೆ.  

ಬೆಂಗಳೂರು (ಸೆ.22): ನವರಾತ್ರಿ ಎಂದಾಕ್ಷಣ ನೆನಪಿಗೆ ಬರೋದು ಮನೆ ಮನೆಗಳಲ್ಲಿ ಗೊಂಬೆ ಕೂರಿಸುವುದು. ಆದರೆ ಇತ್ತೀಚಿನ ದಿನಗಳಲ್ಲಿ ಆ ಸಂಪ್ರದಾಯ ತನ್ನ ಕಳೆ ಕಳೆದುಕೊಳ್ಳುತ್ತಿದೆ. ಆದರೆ ಜನರಿಗೆ ಅರಿವು ಮೂಡಿಸಿ, ಹಬ್ಬದ ಪ್ರಾಮುಖ್ಯತೆಯ ಬಗ್ಗೆ ತಿಳಿಸುವ ದೃಷ್ಟಿಯಿಂದ ನಗರದ ಗರುಡ ಮಾಲ್ ನಲ್ಲಿ ಸಂಪ್ರದಾಯಿಕ ಗೊಂಬೆಗಳನ್ನು ಕೂರಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಾಲ್'ನ ಒಳಗಡೆ ಪ್ರವೇಶಿಸುವ ಮುನ್ನವೇ 12/14 ಅಡಿ ಎತ್ತರದ ಈ ವಿಶೇಷ ದಸರಾ ಬೊಂಬೆಗಳು ನಿಮ್ಮನ್ನ ಆತ್ಮೀಯವಾಗಿ ಸ್ವಾಗತಿಸುತ್ತವೆ. ಈ ಬೊಂಬೆಗಳು ನಮ್ಮ ಬೊಂಬೆ ನಗರಿ ಎಂದೇ ಪ್ರತೀತಿ ಪಡೆದಿರುವ ಚನ್ನಪಟ್ಟಣವನ್ನು ಪ್ರತಿನಿಧಿಸುತ್ತವೆ. ಇಲ್ಲಿ ಮುಖ್ಯವಾಗಿ ನಮ್ಮ ಸಂಪ್ರದಾಯದಂತೆ ಮಾಲ್ ಒಳಗೆ ಸ್ವಾಗತಿಸಲು ಒಂದು ದ್ವಾರವನ್ನು ನಿರ್ಮಿಸಲಾಗಿದೆ.

ಇಂದು ಆರಂಭವಾದ ಈ ಗೊಂಬೆ ಕೂರಿಸುವ ಕಾರ್ಯಕ್ರಮಕ್ಕೆ ಭರ್ಜರಿ ನಟಿ ವೈಶಾಲಿ ದೀಪಿಕಾ ಚಾಲನೆ ನೀಡಿದ್ರು. ಮೈಸೂರಿಗೆ ಹೋಗಲಾಗದೇ ಇರುವವರು ಕೂಡ ಮಾಲ್ ಗೆ ಬಂದು ಸಂತಸ ವ್ಯಕ್ತಪಡಿಸಿದರು. ಹೊರಗಡೆಯಷ್ಟೆ ಅಲ್ಲದೆ ಮಾಲ್ ನ ಒಳಗಡೆಯ ಆವರಣದಲ್ಲಿಯೂ ಕೂಡ ಪೌರಾಣಿಕ ಕಥೆಗಳನ್ನು ಹೇಳುವ ಬೊಂಬೆಗಳನ್ನು ಇಡಲಾಗಿದೆ.