ಸಿಲಿಂಡರ್ ಸ್ಫೋಟ; ಕಟ್ಟಡ ಕುಸಿತ
ಕಾಡುಗೋಡಿ ಬಳಿಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿ ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿದಿದೆ. ಬಿಲ್ಡಿಂಗ್ ಒಳಗೆ ಮೂರರಿಂದ ಐದು ಮಂದಿ ಸಿಲುಕಿರುವ ಶಂಕೆಯಿದೆ.
ಬೆಂಗಳೂರು (ಮೇ.06): ಕಾಡುಗೋಡಿ ಬಳಿಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿ ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿದಿದೆ. ಬಿಲ್ಡಿಂಗ್ ಒಳಗೆ ಮೂರರಿಂದ ಐದು ಮಂದಿ ಸಿಲುಕಿರುವ ಶಂಕೆಯಿದೆ.
ಬೆಳಗ್ಗೆ 10:25 ರ ವೇಳೆಗೆ ಈ ಘಟನೆ ನಡೆದಿದೆ. ಬಿಲ್ಡಿಂಗ್ ಒಳಗೆ ಸುಮಾರು ಏಳೆಂಟು ಮಂದಿ ಇದ್ರು. ಈಗಾಗಲೇ ಇಬ್ಬರನ್ನು ರಕ್ಷಿಸಲಾಗಿದೆ. ಕಟ್ಟಡದ ಅವಶೇಷಗಳ ಅಡಿ ಮೂವರಿಂದ ನಾಲ್ಕು ಮಂದಿ ಸಿಲುಕಿರುವ ಶಂಕೆಯಿದೆ. ಬಿಲ್ಡಿಂಗ್’ನಲ್ಲಿ ಅಕ್ರಮವಾಗಿ ಗ್ಯಾಸ್ ತುಂಬಿಸಲಾಗುತ್ತಿತ್ತು ಎಂದು ಶಂಕಿಸಲಾಗಿದೆ.