ಸೈಕಲ್ ಸವಾರನಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮವಾಗಿ ಸೈಕಲ್ ಸವಾರ ಮೃತಪಟ್ಟಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ನಗರದ ಬಿಇಓ ಕಚೇರಿ ಬಳಿ ಬೆಳಿಗ್ಗೆ 9 ಗಂಟೆ ಸುಮಾರಿಗೆ ಈ ದುರಂತ ನಡೆದಿದೆ.
ಕೊಪ್ಪಳ (ಫೆ.01): ಸೈಕಲ್ ಸವಾರನಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮವಾಗಿ ಸೈಕಲ್ ಸವಾರ ಮೃತಪಟ್ಟಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ನಗರದ ಬಿಇಓ ಕಚೇರಿ ಬಳಿ ಬೆಳಿಗ್ಗೆ 9 ಗಂಟೆ ಸುಮಾರಿಗೆ ಈ ದುರಂತ ನಡೆದಿದೆ.
ಬೆಳಿಗ್ಗೆ 9 ಗಂಟೆ ಸುಮಾರಿಗೆ ದೇವರಾಜ ಅರಸ್ ಕಾಲೋನಿಯ ಸೈಕಲ್ ಸವಾರ 17 ವರ್ಷದ ಅನ್ವರ್ ಬರುತ್ತಿದ್ದ ವೇಳೆಯಲ್ಲಿ ಬಸ್ ಈತನಿಗೆ ಡಿಕ್ಕಿ ಹೊಡೆದು, ಈತನ ಸೊಂಟದ ಮೇಲೆ ಬಸ್ ಹಾದು ಹೋಗಿದೆ. ಆಗ ಅನ್ವರ್ನ ಸೊಂಟದ ಭಾಗದಲ್ಲಿ ತೀವ್ರ ರಕ್ತಸ್ರಾವ ಆಗಲು ಪ್ರಾರಂಭವಾಗಿದೆ. ನೋವಿನಿಂದ ಅನ್ವರ್ ರಸ್ತೆ ಮದ್ಯೆ ಬಿದ್ದು ಒದ್ದಾಡುತ್ತಿದ್ದ. ಕೂಡಲೇ ಆತನ ನೆರವಿಗೆ ಬಂದ ಸ್ಥಳಿಯರು ಆತನಿಗೆ ನೀರು ಕುಡಿಸಿದ್ದಾರೆ. ಜೊತೆಗೆ 108 ಅಂಬ್ಯುಲೇನ್ಸ್ಗೆ ಫೋನ್ ಮಾಡಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಅನ್ವರ್ ಮಧ್ಯಾಹ್ನ ಕೊನೆಯುಸಿರೆಳೆದಿದ್ದಾನೆ. ಇನ್ನು ಅನ್ವರ್ ರಸ್ತೆಯಲ್ಲಿ ಬಿದ್ದು ಹೊರಳಾಡುತ್ತಿದ್ದದ್ದು ಎಂತವರ ಮನಸ್ಸನ್ನು ಕಲಕುವಂತಿತ್ತು. ಇನ್ನು ಘಟನೆ ಕುರಿತು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
