ನೀರಿಗಾಗಿ 2 ಊರುಗಳ ನಡುವೆ ಜಗಳ; ಸಖರಾಯಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿ
ಸಖರಾಯಪಟ್ಟಣ ಹಾಗೂ ಜಿಗಣೆಹಳ್ಳಿ ನಡುವೆ ನೀರಿಗಾಗಿ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿದ್ದು ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ವಿಫರಾಗಿದ್ದು ಲಾಠಿ ಚಾರ್ಜ್ ಮಾಡಿದ್ದಾರೆ. ಸಖರಾಯಪಟ್ಟಣದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಒಂದು ಊರಿಗೆ ನೀರು ಹರಿಸಿದ್ದಕ್ಕಾಗಿ ಮತ್ತೊಂದು ಊರಿನವರು ಗಲಾಟೆ ಮಾಡಿದ್ದಾರೆ.
ಚಿಕ್ಕಮಗಳೂರು (ಫೆ.09): ಸಖರಾಯಪಟ್ಟಣ ಹಾಗೂ ಜಿಗಣೆಹಳ್ಳಿ ನಡುವೆ ನೀರಿಗಾಗಿ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿದ್ದು ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ವಿಫರಾಗಿದ್ದು ಲಾಠಿ ಚಾರ್ಜ್ ಮಾಡಿದ್ದಾರೆ. ಸಖರಾಯಪಟ್ಟಣದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಒಂದು ಊರಿಗೆ ನೀರು ಹರಿಸಿದ್ದಕ್ಕಾಗಿ ಮತ್ತೊಂದು ಊರಿನವರು ಗಲಾಟೆ ಮಾಡಿದ್ದಾರೆ.
ಸಖರಾಯಪಟ್ಟಣದ ಅಯ್ಯನ್ ಕೆರೆಯಿಂದ ಕಡೂರು ಭಾಗದ ಪ್ರದೇಶಗಳಿಗೆ ಮೊನ್ನೆ, ನಿನ್ನೆ ನೀರು ಹರಿಸಲಾಗಿತ್ತು. ಇದಕ್ಕೆ ತಕರಾರು ತೆಗದು ಸಖರಾಯಪಟ್ಟಣದ ನಿವಾಸಿಗಳು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರು. ಕೆರೆಯಲ್ಲಿ ನಾಲ್ಕೈದು ಅಡಿ ನೀರು ಮಾತ್ರ ಇದೆ. ನಮಗೆ ಕುಡಿಯುವ ನೀರಿನ ಕೊರತೆಯಾಗುತ್ತದೆ. ನೀರು ಬಿಡಬೇಡಿ ಎಂದು ಡಿಸಿಗೆ ಮನವಿ ಮಾಡಿಕೊಂಡಿದ್ದರು. ಆದರೆ ಇದಕ್ಕೆ ಜಿಲ್ಲಾಡಳಿತ ಸ್ಪಂದಿಸದ ಕಾರಣ ಸಖರಾಯಪಟ್ಟಣ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಹಾಗಾಗಿ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಸೆಕ್ಷನ್ 144 ಜಾರಿಗೊಳಿಸಿದ್ದಾರೆ.