ಸಿದ್ದರಾಮಯ್ಯ ದುರ್ಯೋಧನ, ದುಶ್ಯಾಸನ,ದೃತರಾಷ್ಟ್ರ ಇರೋದು ಕಾಂಗ್ರೆಸ್'ನಲ್ಲಿ: ಬಿಜೆಪಿ ನಾಯಕ ವಾಗ್ದಾಳಿ
ದುರ್ಯೋಧನನಿಗೂ ಅಹಂಕಾರ ಇತ್ತು, ಸಿದ್ದರಾಮಯ್ಯಗೂ ಅಹಂಕಾರ ಇದೆ ಡಿಕೆಶಿ, ಮೇಟಿ, ಪರಮೇಶ್ವರ್ ಇರೋದು ಕಾಂಗ್ರೆಸ್'ನಲ್ಲಿ ಹಾಗಾಗಿ ಕೌರವರು ಕಾಂಗ್ರೆಸ್'ನವರು
ಚಿಕ್ಕಮಗಳೂರು(ಜ.17): ಸಿದ್ದರಾಮಯ್ಯ ದುರ್ಯೋಧನ ಎಂದು ಶಾಸಕ ಸಿ.ಟಿ. ರವಿ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುರುಕ್ಷೇತ್ರ ನಡೆಯುತ್ತೆ, ನಾವು ಪಾಂಡವರು. ದುರ್ಯೋಧನ, ದುಶ್ಯಾಸನ, ದೃತರಾಷ್ಟ್ರ ಇರೋದು ಕಾಂಗ್ರೆಸ್'ನಲ್ಲಿ. ದುರ್ಯೋಧನನಿಗೂ ಅಹಂಕಾರ ಇತ್ತು, ಸಿದ್ದರಾಮಯ್ಯಗೂ ಅಹಂಕಾರ ಇದೆ ಡಿಕೆಶಿ, ಮೇಟಿ, ಪರಮೇಶ್ವರ್ ಇರೋದು ಕಾಂಗ್ರೆಸ್'ನಲ್ಲಿ ಹಾಗಾಗಿ ಕೌರವರು ಕಾಂಗ್ರೆಸ್'ನವರು. ಸಿದ್ದರಾಮಯ್ಯ ಮಜವಾದಿ. ಅವರ ನಾಯಕರು ಮೇಡ್ ಇನ್ ಇಟಲಿ. ಅವರು ಧರಿಸುವ ಶೂ ಮೇಡ್ ಇನ್ ಸ್ವಿಸ್ ಎಂದು ಏಕವಚನದಲ್ಲಿ ಹರಿಹಾಯ್ದರು.