ಸಿಆರ್ಪಿಎಫ್ ಯೋಧರ ಮೇಲೆ ಉಗ್ರರ ದಾಳಿ ಪ್ರಕರಣ| ಘಟನೆ ನಂತರ ಮೊದಲ ಬಾರಿಗೆ ಪ್ರತಿಕ್ರಯಿಸಿದ ಸಿಆರ್ಪಿಎಫ್| ನಾವು ಮರೆಯಲ್ಲ.. ನಾವು ಕ್ಷಮಿಸಲ್ಲ ಎಂದು ಸಿಆರ್ಪಿಎಫ್ ಟ್ವೀಟ್| ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದ ಪಣ ತೊಟ್ಟ ಸಿಆರ್ಪಿಎಫ್| ಹುತಾತ್ಮ ಯೋಧರ ಕುಟುಂಬಗಳ ಜತೆ ನಾವು ನಿಲ್ಲುತ್ತೇವೆ
ನವದೆಹಲಿ(ಫೆ.15): ಸಿಆರ್ಪಿಎಫ್ ಯೋಧರ ಮೇಲೆ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸದಂತೆ ಸಿಆರ್ಪಿಎಫ್ ಪ್ರತಿಕ್ರಿಯೆ ನೀಡಿದ್ದು, ಗೆಳೆಯರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಪಣ ತೊಟ್ಟಿದೆ. ಈ ಕುರಿತು ಟ್ವೀಟ್ ಮಾಡಿರುವ ಸಿಆರ್ಪಿಎಫ್, ನಾವು ನಮ್ಮ ಗೆಳೆಯರನ್ನು ಮರೆಯವುದಿಲ್ಲ, ಪಾಪಿಗಳನ್ನು ಕ್ಷಮಿಸುವುದಿಲ್ಲ ಎಂದು ತನ್ನ ಆಕ್ರೋಶ ವ್ಯಕ್ತಪಡಿಸಿದೆ.
ಸಹೋದ್ಯೋಗಿಗಳ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪಣ ತೊಟ್ಟಿರುವ ಸಿಆರ್ಪಿಎಫ್, ಹುತಾತ್ಮ ಯೋಧರ ಕುಟುಂಬಗಳ ಜೊತೆ ನಿಲ್ಲುವುದಾಗಿಯೂ ಹೇಳಿದೆ.
ನಿನ್ನೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಆತ್ಮಾಹುತಿ ದಾಳಿಕೋರನೊಬ್ಬ ಸ್ಫೋಟಕಗಳನ್ನು ಹೊತ್ತು ಸಿಆರ್ಪಿಎಫ್ ಯೋಧರು ಸಂಚರಿಸುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ 49 ಸಿಆರ್ಪಿಎಫ್ ಯೋಧರು ಹುತಾತ್ಮರಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
