ಪೊಲೀಸ್ ಅಧಿಕಾರಿಗಳ ವಾಟ್ಸಪ್ ಸಂಭಾಷಣೆ ವೈರಲ್ ಕೊಲ್ಲಲು ಆದೇಶ ಬಂದಿರುವುದು ಗಾಂಧಿನಗರದಿಂದಲೋ? ದೆಹಲಿಯಿಂದಲೋ?: ಜಿಗ್ನೇಶ್

ಅಹಮದಾಬಾದ್: ಪೊಲೀಸ್ ಅಧಿಕಾರಿಗಳ ವಾಟ್ಸಪ್ ಸಂಭಾಷಣೆ ವೈರಲ್ ಆಗಿರುವ ಬೆನ್ನಲ್ಲೇ ಗುಜರಾತ್ ಶಾಸಕ ಹಾಗೂ ದಲಿತ ಯುವನಾಯಕ ಜಿಗ್ನೆಶ್ ಮೆವಾನಿ ತಮ್ಮ ಜೀವಕ್ಕೆ ಅಪಾಯವಿದೆಯೆಂದು ಆತಂಕ ವ್ಯಕ್ತಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪೊಲೀಸ್ ಅಧಿಕಾರಿಗಳು ಸದಸ್ಯರಾಗಿರುವ ‘ADR Police & MEDIA’ ಎಂಬ ವಾಟ್ಸಪ್ ಗ್ರೂಪ್’ನಲ್ಲಿ ಡಿವೈಎಸ್’ಪಿ ಯೊಬ್ಬರು, ರಾಜಕಾರಣಿಯನ್ನು ಪೊಲೀಸರು ಥಳಿಸುವ ಹಾಗೂ ಪೊಲೀಸ್ ಎನ್’ಕೌಂಟರ್’ ಬಗ್ಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮಾತನಾಡುವ ವಿಡಿಯೋ ಕ್ಲಿಪ್ ಹಾಕಿದ್ದಾರೆ. ಬಳಿಕ, ಪೊಲೀಸರ ‘ಅಪ್ಪ’ನಾಗಲು ಹೊರಟಿರುವವರಿಗೆ ಇದೇ ಗತಿ, ಇದನ್ನು ನೆನಪಿನಲ್ಲಿಟ್ಟುಕೊಳ್ಳಿ- ಗುಜರಾತ್ ಪೊಲೀಸ್, ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

Scroll to load tweet…

ಅದಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಮೈಲಿ ಇಮೋಜಿ ಹಾಕುವ ಮೂಲಕ ಪ್ರತಿಕ್ರಯಿಸಿದ್ದಾರೆ. ಆ ಸಂಭಾಷಣೆಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಅದಕ್ಕೆ ಜಿಗ್ನೇಶ್ ಮೆವಾನಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.

ನನ್ನನ್ನು ಮುಗಿಸುವ ಬಗ್ಗೆ ಪೊಲೀಸರು ಚರ್ಚೆ ನಡೆಸುತ್ತಿದ್ದಾರೆ, ನನನ್ನು ಎನ್’ಕೌಂಟರ್’ನಲ್ಲಿ ಕೊಲ್ಲಲು ಆದೇಶ ಬಂದಿರುವುದು ಗಾಂಧಿನಗರದಿಂದಲೋ? ದೆಹಲಿಯಿಂದಲೋ ಎಂದು ಕೇಳಿದ್ದಾರೆ. ಇದು ಗಂಬೀರ ವಿಚಾರ, ಈ ಬಗ್ಗೆ ಗೃಹ ಕಾರ್ಯದರ್ಶಿ ಮತ್ತು ಡಿಜಿಪಿಗೆ ದೂರು ನೀಡುವುದಾಗಿ ಜಿಗ್ನೇಶ್ ಮೆವಾನಿ ಹೇಳಿದ್ದಾರೆ.

Scroll to load tweet…