Asianet Suvarna News Asianet Suvarna News

ವಿಶ್ವನಾಥ್​ರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಕಾಂಗ್ರೆಸ್ ಶತಪ್ರಯತ್ನ

ರೀಗಳ ಸೂಚನೆ ಮೇರೆಗೆ ವಿಶ್ವನಾಥ್​’ರನ್ನ ಕಾಂಗ್ರೆಸ್​​’ನಲ್ಲೇ ಉಳಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ಶತಪ್ರಯತ್ನ  ಮಾಡಿದ್ದಾರೆ. ಅಲ್ಲದೇ ಸಿಎಂ ಸೂಚನೆ ಮೇರೆಗೆ ಇಬ್ಬರು ಶಾಸಕರಾದ ಹೆಚ್.ಎಂ.ರೇವಣ್ಣ ಹಾಗೂ ವರ್ತೂರು ಪ್ರಕಾಶ್​ರನ್ನು ಸಂಧಾನಕ್ಕಾಗಿ ಬೆಂಗಳೂರಿನಿಂದ ಮೈಸೂರಿಗೆ ಹೋಗಿದ್ದಾರೆ.

Congress trying to retain AH Vishwanath in Party

ಬೆಂಗಳೂರು (ಮೇ. 05): ಕಾಂಗ್ರೆಸ್ ಪಕ್ಷದಿಂದ ಇತ್ತೀಚಿನ ಬೆಳವಣಿಗೆಯಿಂದ ಬೇಸತ್ತು ಜೆಡಿಎಸ್​’ನತ್ತ ಮುಖ ಮಾಡಿರೋ ಮಾಜಿ ಸಂಸದ ಅಡಗೂರು ಎಚ್.ವಿಶ್ವನಾಥ್​ರನ್ನು ಕಾಂಗ್ರೆಸ್’​ನಲ್ಲೇ ಉಳಿಸಿಕೊಳ್ಳಲು ಶತಪ್ರಯತ್ನ ನಡೆಯುತ್ತಿದೆ.

ಎಚ್​.ವಿಶ್ವನಾಥ್​​ರನ್ನು ಕಾಂಗ್ರೆಸ್ ಪಕ್ಷದಲ್ಲೇ ಉಳಿಸಿಕೊಳ್ಳಲು ಕಾಗಿನೆಲೆ ಮಠದ ಶ್ರೀಗಳ ಮಧ್ಯಸ್ಥಿಕೆ ವಹಿಸಿದ್ದು, ಕಾಂಗ್ರೆಸ್​ನಲ್ಲಿ ವಿಶ್ವನಾಥ್ ಮೂಲೆಗುಂಪಾಗೋದು ಬೇಡ ಎಂದು ಕಾಗಿನೆಲೆ ಮಠದ ಶ್ರೀಗಳು ಸಿಎಂ ಸಿದ್ದರಾಮಯ್ಯಗೆ ಸಲಹೆ ನೀಡಿದ್ದರು.

ಶ್ರೀಗಳ ಸೂಚನೆ ಮೇರೆಗೆ ವಿಶ್ವನಾಥ್​’ರನ್ನ ಕಾಂಗ್ರೆಸ್​​’ನಲ್ಲೇ ಉಳಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ಶತಪ್ರಯತ್ನ  ಮಾಡಿದ್ದಾರೆ. ಅಲ್ಲದೇ ಸಿಎಂ ಸೂಚನೆ ಮೇರೆಗೆ ಇಬ್ಬರು ಶಾಸಕರಾದ ಹೆಚ್.ಎಂ.ರೇವಣ್ಣ ಹಾಗೂ ವರ್ತೂರು ಪ್ರಕಾಶ್​ರನ್ನು ಸಂಧಾನಕ್ಕಾಗಿ ಬೆಂಗಳೂರಿನಿಂದ ಮೈಸೂರಿಗೆ ಹೋಗಿದ್ದಾರೆ.

ಈಗಾಗಲೇ ಮೈಸೂರಿಗೆ ತಲುಪಿದ ಇಬ್ಬರು ಶಾಸಕರು ವಿಶ್ವನಾಥ್​ರನ್ನು ಭೇಟಿ ಮಾಡಿದ್ದು ಚರ್ಚೆ ನಡೆಸುತ್ತಿದ್ದಾರೆ.

Follow Us:
Download App:
  • android
  • ios