ವಿಶ್ವನಾಥ್ರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಕಾಂಗ್ರೆಸ್ ಶತಪ್ರಯತ್ನ
ರೀಗಳ ಸೂಚನೆ ಮೇರೆಗೆ ವಿಶ್ವನಾಥ್’ರನ್ನ ಕಾಂಗ್ರೆಸ್’ನಲ್ಲೇ ಉಳಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ಶತಪ್ರಯತ್ನ ಮಾಡಿದ್ದಾರೆ. ಅಲ್ಲದೇ ಸಿಎಂ ಸೂಚನೆ ಮೇರೆಗೆ ಇಬ್ಬರು ಶಾಸಕರಾದ ಹೆಚ್.ಎಂ.ರೇವಣ್ಣ ಹಾಗೂ ವರ್ತೂರು ಪ್ರಕಾಶ್ರನ್ನು ಸಂಧಾನಕ್ಕಾಗಿ ಬೆಂಗಳೂರಿನಿಂದ ಮೈಸೂರಿಗೆ ಹೋಗಿದ್ದಾರೆ.
ಬೆಂಗಳೂರು (ಮೇ. 05): ಕಾಂಗ್ರೆಸ್ ಪಕ್ಷದಿಂದ ಇತ್ತೀಚಿನ ಬೆಳವಣಿಗೆಯಿಂದ ಬೇಸತ್ತು ಜೆಡಿಎಸ್’ನತ್ತ ಮುಖ ಮಾಡಿರೋ ಮಾಜಿ ಸಂಸದ ಅಡಗೂರು ಎಚ್.ವಿಶ್ವನಾಥ್ರನ್ನು ಕಾಂಗ್ರೆಸ್’ನಲ್ಲೇ ಉಳಿಸಿಕೊಳ್ಳಲು ಶತಪ್ರಯತ್ನ ನಡೆಯುತ್ತಿದೆ.
ಎಚ್.ವಿಶ್ವನಾಥ್ರನ್ನು ಕಾಂಗ್ರೆಸ್ ಪಕ್ಷದಲ್ಲೇ ಉಳಿಸಿಕೊಳ್ಳಲು ಕಾಗಿನೆಲೆ ಮಠದ ಶ್ರೀಗಳ ಮಧ್ಯಸ್ಥಿಕೆ ವಹಿಸಿದ್ದು, ಕಾಂಗ್ರೆಸ್ನಲ್ಲಿ ವಿಶ್ವನಾಥ್ ಮೂಲೆಗುಂಪಾಗೋದು ಬೇಡ ಎಂದು ಕಾಗಿನೆಲೆ ಮಠದ ಶ್ರೀಗಳು ಸಿಎಂ ಸಿದ್ದರಾಮಯ್ಯಗೆ ಸಲಹೆ ನೀಡಿದ್ದರು.
ಶ್ರೀಗಳ ಸೂಚನೆ ಮೇರೆಗೆ ವಿಶ್ವನಾಥ್’ರನ್ನ ಕಾಂಗ್ರೆಸ್’ನಲ್ಲೇ ಉಳಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ಶತಪ್ರಯತ್ನ ಮಾಡಿದ್ದಾರೆ. ಅಲ್ಲದೇ ಸಿಎಂ ಸೂಚನೆ ಮೇರೆಗೆ ಇಬ್ಬರು ಶಾಸಕರಾದ ಹೆಚ್.ಎಂ.ರೇವಣ್ಣ ಹಾಗೂ ವರ್ತೂರು ಪ್ರಕಾಶ್ರನ್ನು ಸಂಧಾನಕ್ಕಾಗಿ ಬೆಂಗಳೂರಿನಿಂದ ಮೈಸೂರಿಗೆ ಹೋಗಿದ್ದಾರೆ.
ಈಗಾಗಲೇ ಮೈಸೂರಿಗೆ ತಲುಪಿದ ಇಬ್ಬರು ಶಾಸಕರು ವಿಶ್ವನಾಥ್ರನ್ನು ಭೇಟಿ ಮಾಡಿದ್ದು ಚರ್ಚೆ ನಡೆಸುತ್ತಿದ್ದಾರೆ.