ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಸೆಲ್ ಮುಖ್ಯಸ್ಥೆ ರಮ್ಯಾ ಒಂದೆಲ್ಲಾ ಒಂದು ಎಡವಟ್ಟು ಮಾಡಿಕೊಳ್ಳುತ್ತಲೇ ಇರುತ್ತಾರೆ. ಬಿಜೆಪಿ ಮತ್ತು ನರೇಂದ್ರ ಮೋದಿ ಅವರಿಗೆ ಟಾಂಗ್ ಕೊಡಲು ಹೋಗಿ ತಾವೇ ಸಿಕ್ಕಿಹಾಕಿಕೊಳ್ಳುತ್ತಾರೆ.
ಬೆಂಗಳೂರು[ಮಾ. 14] ಮತದಾನ ಜಾಗೃತಿ ಸಂಬಂಧ ಮಾಡಿದ್ದ ಟ್ವೀಟ್ ಮಾಡಿ ಪೇಚಿಗೆ ಸಿಲುಕಿದ್ದ ರಮ್ಯಾ ನಂತರ ಮೋದಿ ಬೆಂಬಲಿಗರನ್ನು ಮೂರ್ಖರು ಎಂದು ಕರೆದು ಟೀಕೆಗೆ ಗುರಿಯಾಗಿದ್ದರು.
ನರೇಂದ್ರ ಮೋದಿಯವರೆ ನೀವು ಹಾಕಿದ ಟ್ವೀಟ್ ಯಾವ ಕಾರಣಕ್ಕೆ ಡಿಲೀಟ್ ಮಾಡಿದಿರಿ? ಎಂದು ಕೇಳಲು ಹೋದ ರಮ್ಯಾ ಮೇಲೆ ಮತ್ತೆ ಟ್ವಿಟರಿಗರು ಮುಗಿಬಿದ್ದಿದ್ದಾರೆ. ಹಗರಣಗಳ ವಿಚಾರ ಎತ್ತಿದ ರಮ್ಯಾಗೆ ಯುಪಿಎ ಸರಕಾರದ ಹಗರಣಗಳ ಉದಾಹರಣೆ ನೀಡಿದ್ದಾರೆ.
ಮೋದಿ ಬೆಂಬಲಿಗರ ಅಣಕವಾಡಲು ಹೋಗಿ ಎಡವಟ್ಟು ಮಾಡಿಕೊಂಡ ರಮ್ಯಾ!
Scroll to load tweet…
