Asianet Suvarna News Asianet Suvarna News

ಆಪರೇಷನ್ : ವಿಶ್ವಾಸಮತಕ್ಕೆ ಕಾಂಗ್ರೆಸ್ ಶಾಸಕ ಗೈರು

ವಿಶ್ವಾಸಮತ ಯಾಚನೆಗೆ ಡೆಡ್ ಲೈನ್ ಇಂದು ನೀಡಲಾಗಿದೆ. ಇದೇ ವೇಳೆ ಕೈ ಆಪರೇಷನ್ ಹಿನ್ನೆಲೆ ಕೈ ಶಾಸಕರೋರ್ವರು ಗೈರಾಗಲಿದ್ದಾರೆ. ಇದರಿಂದ ಮೈತ್ರಿ ಪಾಳಯದ ನಂಬರ್ ಗಳಲ್ಲಿ ಮತ್ತಷ್ಟು ಕುಸಿತವಾಗಿದೆ.

Congress MLA B Nagendra Will Absent Floor Test
Author
Bengaluru, First Published Jul 22, 2019, 11:00 AM IST

ಬೆಂಗಳೂರು [ಜು.22] : ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿರುವ ಬಳ್ಳಾರಿ ಗ್ರಾಮಾಂತರ ಶಾಸಕ ಬಿ. ನಾಗೇಂದ್ರ ಇಂದೂ ಕೂಡ ಸದನಕ್ಕೆ ಗೈರಾಗಲಿದ್ದಾರೆ. 

ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ನಾಗೇಂದ್ರಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ಆಪರೇಷನ್ ನಡೆಯಲಿದ್ದು, ಈ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ. 

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇಂದು ಮೈತ್ರಿ ಪಾಳಯದ ವಿಶ್ವಾಸಮತ ಯಾಚನೆ ನಡೆಯುವ ಸಾಧ್ಯತೆ ಇದ್ದು, ಈ ವೇಳೆ ಶಾಸಕ ನಾಗೇಂದ್ರ ಗೈರಾಗಲಿದ್ದಾರೆ. 

ಇನ್ನು ವಿಶೇಷ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವಾರ್ಡ್ ಬಳಿ ಪೊಲೀಸರ ನಿಯೋಜನೆ ಮಾಡಿದ್ದು, ಯಾರ ಭೇಟಿಗೂ ಅವಕಾಶ ನೀಡುತ್ತಿಲ್ಲ.

Follow Us:
Download App:
  • android
  • ios