Asianet Suvarna News Asianet Suvarna News

ಓಡೋಡಿ ಬಂದ ರೆಬಲ್ಸ್.. ಸ್ಪೀಕರ್ ಮುಂದೆ 11 ಶಾಸಕರು.. ಒಳಗೇನಾಗ್ತಿದೆ?

ಸುಪ್ರೀಂ ಕೋರ್ಟ್ ಹೇಳಿದ್ದ ಅವಧಿ ಒಳಗೆ ಅತೃಪ್ತ ಶಾಸಕರು ವಿಧಾನಸೌಧದ ಕಚೇರಿ ತಲುಪಲು ವಿಫಲರಾಗಿದ್ದಾರೆ.  ಅತೃಪ್ತ 11 ಜನ ಶಾಸಕರು ಸ್ಪೀಕರ್ ಮುಂದೆ ಹಾಜರಾಗಿದ್ದಾರೆ.

Congress and JDS Rebel Mlas Arrivals Speaker Ramesh Kumar Office Vidhana Soudha
Author
Bengaluru, First Published Jul 11, 2019, 6:22 PM IST

ಬೆಂಗಳೂರು[ಜು. 11] ಸಂಜೆ 6 ಗಂಟೆಯೊಳಗೆ ಸ್ಪೀಕರ್ ಕಚೇರಿಗೆ ಅತೃಪ್ತರು ತೆರಳಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಆದರೆ ಬರುವುದು ಕೊಂಚ ತಡವಾಗಿದೆ. ಇದೀಗ  ಸ್ಪೀಕರ್ ರಮೇಶ್ ಕುಮಾರ್  ಸಂಜೆ 7ಕ್ಕೆ ಪತ್ರಿಕಾಗೋಷ್ಠಿ ನಡೆಸುತ್ತೇನೆ ಎಂದಿರುವುದು ಮತ್ತಷ್ಟು ಕುತೂಹಲ ಹೆಚ್ಚಿಸಿದೆ.

"

ಮುಂಬೈನಿಂದ ಹೊರಟ ಅತೃಪ್ತರು ವಿಮಾಣದ ಮೂಲಕ ಬೆಂಗಳೂರಿಗೆ ಬಂದಿಳಿದರು. ಎಚ್‌ ಎ ಎಲ್ ವಿಮಾನ ನಿಲ್ದಾಣದ ಮೂಲಕ ಎಂಜಿ ರಸ್ತೆ ಮಾರ್ಗವಾಗಿ ಸ್ಪೀಕರ್ ಕಚೇರಿಗೆ ಆಗಮಿಸುವಾಗ 4 ನಿಮಿಷ ತಡವಾಗಿತ್ತು. ಬಸ್ ಇಳಿದ ಶಾಸಕ ಬೈರತಿ ಬಸವರಾಜ್ ಅಕ್ಷರಶಃ ಓಡೋಡಿ ಬಂದರು.

ವಿಧಾನಸೌಧದಲ್ಲಿ ಹೊಡಿ-ಬಡಿ,  ರಾಜೀನಾಮೆ ಕೊಟ್ಟ ಸುಧಾಕರ್‌ಗೆ ದಿಗ್ಬಂಧನ

ಇದೀಗ 11 ಜನ ಅತೃಪ್ತರು ಸ್ಪೀಕರ್ ಎದುರು ಹಾಜರಾಗಿದ್ದು ವಿಚಾರಣೆ ಆರಂಭವಾಗಿದೆ. ಒಂದು ಗಂಟೆ ನಂತರ ಸ್ಪಷ್ಟ ಆದೇಶ ಹೊರಬರುವ ಸಾಧ್ಯತೆ ಇದೆ.

Follow Us:
Download App:
  • android
  • ios