Asianet Suvarna News Asianet Suvarna News

ಬಿಜೆಪಿಯ ಜಾರ್ಜ್ ಬಾಣಕ್ಕೆ, ಕಾಂಗ್ರೆಸ್ ರೆಡ್ಡಿ ಬಾಣ

ಡಿವೈಎಸ್ಪಿ ಗಣಪತಿ ನಿಗೂಢ ಸಾವಿನ ಕೇಸ್ ನಲ್ಲಿ  ಬಿಜೆಪಿ ಕಾಂಗ್ರೆಸ್ ವಿರುದ್ಧ ಬಿಟ್ಟಿರುವ ಜಾರ್ಜ್ ಬಾಣಕ್ಕೆ, ಕಾಂಗ್ರೆಸ್ ಬಣ ರೆಡ್ಡಿ ಬಾಣ ಬಿಟ್ಟಿದೆ.

Congress and BJP Fighting in DySP Ganapati Case

ಬೆಂಗಳೂರು (ಅ.27): ಡಿವೈಎಸ್ಪಿ ಗಣಪತಿ ನಿಗೂಢ ಸಾವಿನ ಕೇಸ್ ನಲ್ಲಿ  ಬಿಜೆಪಿ ಕಾಂಗ್ರೆಸ್ ವಿರುದ್ಧ ಬಿಟ್ಟಿರುವ ಜಾರ್ಜ್ ಬಾಣಕ್ಕೆ, ಕಾಂಗ್ರೆಸ್ ಬಣ ರೆಡ್ಡಿ ಬಾಣ ಬಿಟ್ಟಿದೆ.

ಪ್ರಧಾನಿ ನರೇಂದ್ರ ಮೋದಿ ಹೇಳಿದಂತೆ ಸಿಬಿಐ ಕೇಳುತ್ತಿದೆಯಂತೆ. ಮೋದಿ ಮನ್ ಕೀ ಬಾತ್ ಪ್ರಕಾರ ಸಿಬಿಐ ತಕ್ಕ ತ್ತೈ ಕುಣಿಯುತ್ತಿದೆ. ಅಕ್ರಮ ಅದಿರು ಮಾರಾಟ ಹಾಗೂ ಸಾಗಾಟವನ್ನು ಕಾಂಗ್ರೆಸ್  ಕೆಣಕಿದೆ. ಅಲ್ಲದೇ  ಬೇಲೇಕೇರಿ ಅದಿರು ನಾಪತ್ತೆ ಪ್ರಕರಣವನ್ನೂ ಕಾಂಗ್ರೆಸ್ ಕೆಣಕಿದೆ. ಮೋದಿ ಆಜ್ಞೆಯಂತೆ  ಸಾಕ್ಷ್ಯಾಧಾರಗಳಿಲ್ಲ ಅಂತ ಸಿಬಿಐ ಹೇಳಿದೆಯಂತೆ. ನೀನು ನೀನೆ.. ಇಲ್ಲಿ ನಾನು ನಾನೇ ಹಾಡಿನ ರೂಪದಲ್ಲಿ ಲೇವಡಿ ಮಾಡಿದ್ದಾರೆ. ಬಿಜೆಪಿಯಿಂದ ಜಾರ್ಜ್ ಬಾಣ.. ಗಣಪತಿ ಕೇಸ್​ನಲ್ಲಿ ಜಾರ್ಜ್ ಆರೋಪಿಯಾದ ಬೆನ್ನಲ್ಲೇ ತಿರುಗೇಟು ನೀಡಿದೆ. ಸಿಬಿಐ ಎಫ್​ಐಆರ್ ದಾಖಲಿಸಿದ ಬೆನ್ನಲ್ಲೇ ಕಾಂಗ್ರೆಸ್ ತಿರುಗಿಬಿದ್ದಿದೆ. ಬಿಜೆಪಿ ವಿರುದ್ಧದ ಆರೋಪಗಳ ಬಗ್ಗೆ ವಿಡಿಯೋ ರಿಲೀಸ್ ಮಾಡಿದೆ.

Follow Us:
Download App:
  • android
  • ios