ಬ್ರಾಹ್ಮಣರ ಭಾವನೆಗಳಿಗೆ ನೋವುಂಟು ಮಾಡಿದ ಸಚಿವರ ವಿರುದ್ಧ ದೂರು
ಬ್ರಾಹ್ಮಣರ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಎನ್ನುವ ಆರೋಪದಡಿ ರಾಜಸ್ತಾನದ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಸಚಿವವ ಮೇಲೆ ಪ್ರಕರಣ ದಾಖಲಾಗಿದೆ.
ನವದೆಹಲಿ (ಏ.15): ಬ್ರಾಹ್ಮಣರ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಎನ್ನುವ ಆರೋಪದಡಿ ರಾಜಸ್ತಾನದ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಸಚಿವವ ಮೇಲೆ ಪ್ರಕರಣ ದಾಖಲಾಗಿದೆ.
ಯಾವುದೇ ಡಿಗ್ರಿಯಿಲ್ಲದೇ ಬ್ರಾಹ್ಮಣರು ತಮ್ಮ ಹೆಸರಿನ ಮುಂದೆ ಪಂಡಿತ್ ಅಂತ ಬಳಸುತ್ತಾರೆ ಎಂದು ಇತ್ತೀಚಿಗೆ ಸಮಾರಂಭವೊಂದರಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಸಚಿವ ವಾಸುದೇವ್ ದೇವನಾನಿ ಪ್ರಶ್ನಿಸಿದ್ದರು. ಸಚಿವರ ಈ ಹೇಳಿಕೆ ಬ್ರಾಹ್ಮಣರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಉಮಾಕಾಂತ್ ಓಜಾ ಆಪಾದಿಸಿ ಲಿಖಿತ ದೂರು ನೀಡಿದ್ದಾರೆ.
ಪೊಲೀಸರು ಸಚಿವರ ಮೇಲೆ ಎಫ್ ಐಆರ್ ದಾಖಲಿಸದೇ ಆರೊಪದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
(ಸಾಂದರ್ಭಿಕ ಚಿತ್ರ)
Last Updated Apr 11, 2018, 1:10 PM IST