ಎರಡು ದಿನಗಳ ಕಾಲ ನಡೆದ  ಜಿಎಸ್‌ಟಿ ಮಂಡಳಿ ಸಭೆಯಲ್ಲಿ  ಈ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ. ಹೀಗಾಗಿ ನವೆಂಬರ್ 3 ಮತ್ತು 4ರಂದು ಮಂಡಳಿಯು ಮತ್ತೆ ಸಭೆ ಸೇರಲಿದೆ.

ನವದೆಹಲಿ (ಅ.20): ಸರಕು ಮತ್ತು ಸೇವಾ ತೆರಿಗೆ ದರಗಳನ್ನು ನಿಗದಿ ಮಾಡುವ ಕುರಿತು ಒಮ್ಮತಕ್ಕೆ ಬರುವಲ್ಲಿ ಜಿಎಸ್‌ಟಿ ಮಂಡಳಿ ಸಭೆ ವಿಫಲವಾಗಿವೆ. 

ಎರಡು ದಿನಗಳ ಕಾಲ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ. ಹೀಗಾಗಿ ನವೆಂಬರ್ 3 ಮತ್ತು 4ರಂದು ಮಂಡಳಿಯು ಮತ್ತೆ ಸಭೆ ಸೇರಲಿದೆ.

‘ಜಿಎಸ್‌ಟಿಯಿಂದ ರಾಜ್ಯ ಸರ್ಕಾರಗಳಿಗೆ ಆಗುವ ನಷ್ಟ ಭರ್ತಿ ಮಾಡಲು ವಿಲಾಸಿ ಸರಕು, ತಂಬಾಕು, ಸಿಗರೇಟ್‌ ಮತ್ತು ಮದ್ಯದ ಮೇಲೆ ಹೆಚ್ಚುವರಿ ತೆರಿಗೆ ವಿಧಿಸುವ ನಿರ್ಧಾರಕ್ಕೆ ಬರಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ತಿಳಿಸಿದ್ದಾರೆ.