ಕಾನೂನು ಕೈಗೆತ್ತಿಕೊಳ್ಳುವ ಗೋರಕ್ಷಕರಿಗೆ ಸಿಎಂ ಖಡಕ್ ಎಚ್ಚರಿಕೆ
ತಮ್ಮ ಟ್ವೀಟರ್ ಖಾತೆಯಲ್ಲಿ ಎಚ್ಚರಿಸಿದ ಸಿಎಂ, ಯಾವುದೇ ಗುಂಪು, ವ್ಯಕ್ತಿಗಳಿಗೆ ಕರ್ನಾಟಕ ಗೋ ವಧೆ ತಡೆ ಕಾಯಿದೆ-1964ರ ಅಡಿಯಲ್ಲಿ ರಕ್ಷಣೆ ದೊರೆಯುವುದಿಲ್ಲ ಅಂತ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು (ಮೇ.05): ಗೋರಕ್ಷಣೆ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳುವ ವ್ಯಕ್ತಿಗಳಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಎಚ್ಚರಿಕೆ ನೀಡಿದ್ದಾರೆ.
ತಮ್ಮ ಟ್ವೀಟರ್ ಖಾತೆಯಲ್ಲಿ ಎಚ್ಚರಿಸಿದ ಸಿಎಂ, ಯಾವುದೇ ಗುಂಪು, ವ್ಯಕ್ತಿಗಳಿಗೆ ಕರ್ನಾಟಕ ಗೋ ವಧೆ ತಡೆ ಕಾಯಿದೆ-1964ರ ಅಡಿಯಲ್ಲಿ ರಕ್ಷಣೆ ದೊರೆಯುವುದಿಲ್ಲ ಅಂತ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಗೋರಕ್ಷಣೆಯ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳುವ ಯಾವುದೇ ಗುಂಪು, ವ್ಯಕ್ತಿಗಳಿಗೆ ಕರ್ನಾಟಕ ಗೋವಧೆ ತಡೆ ಕಾಯಿದೆ -1964ರ ಅಡಿ ರಕ್ಷಣೆ ದೊರೆಯುವುದಿಲ್ಲ
— CM of Karnataka (@CMofKarnataka) May 4, 2017
ನಮ್ಮ ಸರ್ಕಾರವು ಯಾವುದೇ ರೀತಿಯ ಪಹರೆದಾರಿಕೆಯನ್ನು ಬೆಂಬಲಿಸುವುದಿಲ್ಲ. ಕೆಲ ಮಾಧ್ಯಮಗಳು ವಸ್ತುಸ್ಥಿತಿಯನ್ನು ತಿರುಚಿ ವರದಿ ಮಾಡಿರುವುದು ದುರದೃಷ್ಟಕರ
— CM of Karnataka (@CMofKarnataka) May 4, 2017
ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು ಟ್ವೀಟರ್ನಲ್ಲೇ ಹಿಂದೂಪರ ಸಂಘಟನೆ ಕಾರ್ಯಕರ್ತರು ಸಿಎಂ ವಿರುದ್ಧ ಹರಿಹಾಯ್ದಿದ್ದಾರೆ.