ನಾರಾಯಣಪೇಟೆ ಎಪಿಎಂಸಿಯಲ್ಲಿ ಶಾಸಕ ರಾಜಣ್ಣ ಮೂಟೆ ಹೊತ್ತು, ಕಸ ಗುಡಿಸಿದ್ದರೆ, ರಂಗಾರೆಡ್ಡಿ ಜಿಲ್ಲೆ ಶಹಬಾದ್’ನಲ್ಲಿ ಎಂಎಲ್’ಸಿ ನರೇಂದ್ರ ರೆಡ್ಡಿ ರಸ್ತೆ ಬದಿ ಕಸ ಗುಡಿಸಿ ಕೂಲಿ ಕೆಲಸ ಮಾಡಿದ್ದಾರೆ.
ಹೈದರಾಬಾದ್ (ಏ.15): ವಾರಂಗಲ್’ನಲ್ಲಿ ನಡೆಯಲಿರುವ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್’ಎಸ್) ಪಕ್ಷದ ಸಂಸ್ಥಾಪನಾ ದಿನಾಚರಣೆಗೆ ಹಣ ಸಂಗ್ರಹಿಸಿಲು ಟಿಆರ್ಎಸ್ ನಾಯಕರು ಕೂಲಿ ಮಾಡುತ್ತಿದ್ದಾರೆ.
ಸ್ವತಃ ಸಿಎಂ ಚಂದ್ರಶೇಖರ್ ರಾವ್ ಕೂಡ ಕೂಲಿ ಮಾಡಿ ಪಕ್ಷಕ್ಕೆ ಹಣ ಸಂಗ್ರಹಿಸಲಿದ್ದಾರೆ. ಈ ಸಂಬಂಧ ನಿನ್ನೆ ಸಿಎಂ ಪುತ್ರ ಸಚಿವ ಕೆ.ಟಿ.ರಾಮರಾವ್ ವಾರಂಗಲ್’ನ ಐಸ್’ಕ್ರೀಂ ಮಳಿಗೆಯಲ್ಲಿ ಕೆಲಸ ಮಾಡಿದ್ದಾರೆ. ಅವರು ಮಾಡಿದ ಕೆಲಸಕ್ಕೆ ಸಿಕ್ಕ ಕೂಲಿ ಬರೋಬ್ಬರಿ 7.5 ಲಕ್ಷ ರೂ.ಗಳು.
ನಾರಾಯಣಪೇಟೆ ಎಪಿಎಂಸಿಯಲ್ಲಿ ಶಾಸಕ ರಾಜಣ್ಣ ಮೂಟೆ ಹೊತ್ತು, ಕಸ ಗುಡಿಸಿದ್ದರೆ, ರಂಗಾರೆಡ್ಡಿ ಜಿಲ್ಲೆ ಶಹಬಾದ್’ನಲ್ಲಿ ಎಂಎಲ್’ಸಿ ನರೇಂದ್ರ ರೆಡ್ಡಿ ರಸ್ತೆ ಬದಿ ಕಸ ಗುಡಿಸಿ ಕೂಲಿ ಕೆಲಸ ಮಾಡಿದ್ದಾರೆ.
