ಸಿಎಂ. ಸಿದ್ಧರಾಮಯ್ಯ ಮೈಸೂರಿನಲ್ಲಿ ಇಂದು ಸೈಕಲ್ ಸವಾರಿ ಮಾಡಿ ಎಲ್ಲರ ಗಮನ ಸೆಳೆದರು.  ದೇಶದ ಮೊಟ್ಟಮೊದಲ ಸಾರ್ವಜನಿಕ ಸೈಕಲ್ ಬಳಕೆ ವ್ಯವಸ್ಥೆ ‘ಟ್ರಿಣ್ ಟ್ರಿಣ್’ಗೆ  ಸ್ವತಃ ತಾವೇ ಸೈಕಲ್ ತುಳಿಯುವ ಮೂಲಕ ಸಿಎಂ.ಸಿದ್ಧರಾಮಯ್ಯ ಚಾಲನೆ ನೀಡಿದರು. 

ಮೈಸೂರು (ಜೂ.04): ಸಿಎಂ. ಸಿದ್ಧರಾಮಯ್ಯ ಮೈಸೂರಿನಲ್ಲಿ ಇಂದು ಸೈಕಲ್ ಸವಾರಿ ಮಾಡಿ ಎಲ್ಲರ ಗಮನ ಸೆಳೆದರು. ದೇಶದ ಮೊಟ್ಟಮೊದಲ ಸಾರ್ವಜನಿಕ ಸೈಕಲ್ ಬಳಕೆ ವ್ಯವಸ್ಥೆ ‘ಟ್ರಿಣ್ ಟ್ರಿಣ್’ಗೆ ಸ್ವತಃ ತಾವೇ ಸೈಕಲ್ ತುಳಿಯುವ ಮೂಲಕ ಸಿಎಂ.ಸಿದ್ಧರಾಮಯ್ಯ ಚಾಲನೆ ನೀಡಿದರು. 

Add Asianetnews Kannada as a Preferred SourcegooglePreferred

ನಗರದ ಜಯಚಾಮರಾಜ ಒಡೆಯರ್ ವೃತ್ತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸೈಕಲ್ ಸವಾರಿ ವಿಶೇಷವಾಗಿತ್ತು. ರಾಜ್ಯ ಸರ್ಕಾರದ ನಗರ ಭೂ ಸಾರಿಗೆ ನಿರ್ದೇಶನಾಲಯ ಮತ್ತು ಮೈಸೂರು ಮಹಾನಗರ ಪಾಲಿಕೆಯ ಸಹಯೋಗದಲ್ಲಿ ಸೈಕಲ್ ವ್ಯವಸ್ಥೆ ಜಾರಿಗೆ ಬರುತ್ತಿದ್ದು ನಾಗರಿಕರಿಗೆ ಖುಷಿ ತಂದಿದೆ.