ಕುರ್ಚಿಯಿಂದ ಬಿದ್ದ ಸಿಎಂ : ತಲೆಗೆ ಗಾಯ
ಪ್ರಚಾರ ಸಂದರ್ಭದಲ್ಲಿ ತಾಲೂಕಿನ ಮಾವಿನಹಳ್ಳಿಯ ಕಾರ್ಯಕರ್ತ ರಾಮೇಗೌಡ ಅವರ ಮನೆಯಲ್ಲಿ ಸೋಮವಾರ ಸಂಜೆ ತಿಂಡಿ ತಿನ್ನುವ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುರ್ಚಿಯಿಂದ ಆಯತಪ್ಪಿ ಕೆಳಗೆ ಬಿದ್ದಿದ್ದು ತಲೆಗೆ ಸಣ್ಣ ಗಾಯವಾಗಿದೆ
ಮೈಸೂರು: ಪ್ರಚಾರ ಸಂದರ್ಭದಲ್ಲಿ ತಾಲೂಕಿನ ಮಾವಿನಹಳ್ಳಿಯ ಕಾರ್ಯಕರ್ತ ರಾಮೇಗೌಡ ಅವರ ಮನೆಯಲ್ಲಿ ಸೋಮವಾರ ಸಂಜೆ ತಿಂಡಿ ತಿನ್ನುವ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುರ್ಚಿಯಿಂದ ಆಯತಪ್ಪಿ ಕೆಳಗೆ ಬಿದ್ದಿದ್ದು ತಲೆಗೆ ಸಣ್ಣ ಗಾಯವಾಗಿದೆ.
ಬೀಳುವ ವೇಳೆ ಹಿಂಬದಿ ಇದ್ದ ಷೋಕೇಸ್ಗೆ ತಲೆಗೆ ತಾಗಿತ್ತು. ಈ ವೇಳೆ ಸ್ಥಳದಲ್ಲೇ ಇದ್ದ ಪುತ್ರ ಡಾ.ಯತೀಂದ್ರ ತಕ್ಷಣ ಪರೀಕ್ಷಿಸಿದ್ದಾರೆ. ಏನೂ ತೊಂದರೆ ಇಲ್ಲವೆಂದ ಬಳಿಕ ಮತ್ತೆರಡು ಗ್ರಾಮಗಳಲ್ಲಿ ಪ್ರಚಾರ ಕಾರ್ಯ ಮುಂದುವರೆಸಿದರು. ನಂತರ ಮೈಸೂರಿಗೆ ತೆರಳಿ ಖಾಸಗಿ ಆಸ್ಪತ್ರೆಯಲ್ಲಿ ತಪಾಸಣೆಗೊಳಗಾಗಿ ಬೆಂಗಳೂರಿಗೆ ತೆರಳಿದರು ಎಂದು ತಿಳಿದುಬಂದಿದೆ.