Asianet Suvarna News Asianet Suvarna News

ಎಸ್‌.ಆರ್‌. ಪಾಟೀಲ್‌ಗೆ ಟಿಕೆಟ್‌ ಕೇಳಿದವರ ವಿರುದ್ದ ಸಿಎಂ ಕೆಂಡಾಮಂಡಲ

ತಾಲೂಕಿನ ಅಸುಂಡಿಯಲ್ಲಿ ಮಂಗಳವಾರ ಕೆರೆ ತುಂಬಿಸುವ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿ ಭಾಷಣ ಮಾಡುತ್ತಿದ್ದಾಗ ಕೆಲವರು ವೇದಿಕೆ ಎದುರು ಬಂದು ಬ್ಯಾಡಗಿ ಕ್ಷೇತ್ರದಿಂದ ಎಸ್‌.ಆರ್‌. ಪಾಟೀಲರಿಗೆ ಟಿಕೆಟ್‌ ನೀಡುವಂತೆ ಒತ್ತಾಯಿಸಿದ್ದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾದ ಪ್ರಸಂಗ ನಡೆಯಿತು. ಈ ವೇಳೆ ಒಂದು ಹಂತದಲ್ಲಿ ಆಕ್ರೋಶಗೊಂಡ ಸಿದ್ದರಾಮಯ್ಯ ಕಾರ್ಯಕರ್ತರನ್ನು ತರಾಟೆಗೆ ತೆಗೆದುಕೊಂಡರು.

CM Siddaramaiah Angry About Ticket Issue

ಹಾವೇರಿ : ತಾಲೂಕಿನ ಅಸುಂಡಿಯಲ್ಲಿ ಮಂಗಳವಾರ ಕೆರೆ ತುಂಬಿಸುವ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿ ಭಾಷಣ ಮಾಡುತ್ತಿದ್ದಾಗ ಕೆಲವರು ವೇದಿಕೆ ಎದುರು ಬಂದು ಬ್ಯಾಡಗಿ ಕ್ಷೇತ್ರದಿಂದ ಎಸ್‌.ಆರ್‌. ಪಾಟೀಲರಿಗೆ ಟಿಕೆಟ್‌ ನೀಡುವಂತೆ ಒತ್ತಾಯಿಸಿದ್ದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾದ ಪ್ರಸಂಗ ನಡೆಯಿತು. ಈ ವೇಳೆ ಒಂದು ಹಂತದಲ್ಲಿ ಆಕ್ರೋಶಗೊಂಡ ಸಿದ್ದರಾಮಯ್ಯ ಕಾರ್ಯಕರ್ತರನ್ನು ತರಾಟೆಗೆ ತೆಗೆದುಕೊಂಡರು.

ಸಿಎಂ ಭಾಷಣ ಆರಂಭಿಸುತ್ತಿದ್ದಂತೆ ಕೆಲವರು ವೇದಿಕೆ ಹತ್ತಿರವೇ ಬಂದು ಏರು ಧ್ವನಿಯಲ್ಲಿ ಮಾತನಾಡಲು ಆರಂಭಿಸಿದರು. ಈ ಬಾರಿ ಬ್ಯಾಡಗಿ ಕ್ಷೇತ್ರದ ಅಭ್ಯರ್ಥಿ ಬದಲಾಗಬೇಕು. ಪಕ್ಷದ ಮುಖಂಡ ಎಸ್‌.ಆರ್‌. ಪಾಟೀಲ ಅವರಿಗೆ ಟಿಕೆಟ್‌ ನೀಡಬೇಕು ಎಂದು ಒತ್ತಾಯಿಸಿದರು. ಆಗ ಗರಂ ಆದ ಸಿದ್ದರಾಮಯ್ಯ, ಇವರು ಎಸ್‌.ಆರ್‌. ಪಾಟೀಲ ಕಡೆಯವರಾ ? ಏ ಪಾಟೀಲ, ಏನಿದು? ಅವರು ಕಾಂಗ್ರೆಸಿಗರಾಗಿ ಹೀಗೆ ಮಾಡುತ್ತಿದ್ದಾರಾ? ಟಿಕೆಟ್‌ ಬಗ್ಗೆ ಹೇಳೋಕೆ ಇದು ಸರ್ಕಾರಿ ಕಾರ್ಯಕ್ರಮ. ಅಷ್ಟೂಗೊತ್ತಾಗಲ್ವಾ ಎಂದು ಅಸಮಾಧಾನ ಹೊರಹಾಕಿದರು. ಆಗ ಪೊಲೀಸರು ಬಂದು ಪಾಟೀಲರ ಅಭಿಮಾನಿಗಳನ್ನು ದೂರಕ್ಕೆ ಕಳುಹಿಸಿದರು.

Follow Us:
Download App:
  • android
  • ios